This is the title of the web page
This is the title of the web page

Please assign a menu to the primary menu location under menu

Local News

ಬೈಲಹೊಂಗಲ ತಾಲೂಕಾ ಏಳನೇಯ ಕನ್ನಡ ಸಾಹಿತ್ಯ ಸಮ್ಮೇಳನ


ಬೈಲಹೊಂಗಲ : ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ, ಬೈಲಹೊಂಗಲ ತಾಲೂಕಾ ಏಳನೇಯ ಕನ್ನಡ ಸಾಹಿತ್ಯ ಸಮ್ಮೇಳನವು ಶುಕ್ರವಾರ ದಿ:೦೩/೦೨/೨೦೨೩ ರಂದು ಸ್ಥಳ: ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಮಾದರಿ ಶಾಲೆ ದೇವಲಾಪೂರ ಗ್ರಾಮದಲ್ಲಿ ಜರುಗಲಿದೆ.
ಮುಂಜಾನೆ:೮:೦೦ ಘಂಟೆಗೆ, ಸ್ವಾಗತ ಸಮಿತಿಯ ಅಧ್ಯಕ್ಷರು ಶ್ರೀ ಈಶ್ವರ ಶಿ ಉಳ್ಳೇಗಡ್ಡಿ ಅವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸುವರು. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸುವರು. ಕಸಾಪ ಬೈಲಹೊಂಗಲ ತಾಲೂಕಾಧ್ಯಕ್ಷರಾದ ಶ್ರೀ ಎನ್ ಆರ್ ಠಕ್ಕಾಯಿ ಅವರು ನಾಡ ಧ್ವಜಾರೋಹಣವನ್ನು ನೆರವೇರಿಸುವರು. ಸಮ್ಮೇಳನವು ಬೈಲಹೊಂಗಲ ಮೂರುಸಾವಿರಮಠದ ಶ್ರೀ.ಮ.ನಿ.ಪ್ರ. ಪ್ರಭುನೀಲಕಂಠ ಮಹಾಸ್ವಾಮಿಗಳು ಹಾಗೂ ದೇವಲಾಪೂರ ಶಿವಾನಂದಮಠ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ.
ಬೈಲಹೊಂಗಲ ಮಾನ್ಯ ಶಾಸಕರು ಶ್ರೀ ಮಹಾಂತೇಶ ಶಿ ಕೌಜಲಗಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಿತ್ತೂರಿನ ಮಾನ್ಯ ಶಾಸಕರು ಶ್ರೀ ಮಹಾಂತೇಶ ದೊಡಗೌಡರ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಡಾ.ಶಾಂತಿನಾಥ ದಿಬ್ಬದ ಸಾಹಿತಿಗಳು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಡಾ.ವಿಶ್ವನಾಥ ಪಾಟೀಲ, ಶ್ರೀ ಮಲ್ಲಿಕಾರ್ಜುನ ತುಬಾಕಿ, ಶ್ರೀ ಬಸವರಾಜ ಜನ್ಮಟ್ಟಿ, ಶ್ರೀ ಜಗದೀಶ ಮೆಟಗುಡ್ಡ, ಶ್ರೀ ಶಂಕರ ಮಾಡಲಗಿ, ಶ್ರೀ ಬಸವರಾಜ ಪಟ್ಟೇದ, ಶ್ರೀಮತಿ ಜೈರಾಬಿ ನದಾಫ್, ಶ್ರೀ ಶಿವರಂಜನ ಬೋಳಣ್ಣವರ, ಶ್ರೀ ಸಿ ಕೆ ಮೆಕ್ಕೇದ, ಶ್ರೀ ಈಶ್ವರ ಹೋಟಿ, ಶ್ರೀ ಮಹಾಂತೇಶ ತುರಮರಿ, ಶ್ರೀ ಮೋಹನ ಪಾಟೀಲ, ಶ್ರೀ ಎಸ್ ಡಿ ಗಂಗಣ್ಣವರ, ಶ್ರೀ ಬಸವರಾಜ ತಲ್ಲೂರ, ಶ್ರೀ ಮಹಾರುದ್ರಪ್ಪ ನಂದೆನ್ನವರ, ಶ್ರೀ ಶಿವಾನಂದ ಕುಡಸೋಮಣ್ಣವರ, ಶ್ರೀಮತಿ ಪ್ರೇಮಕ್ಕ ಅಂಗಡಿ, ಶ್ರೀಮತಿ ಗೌರಾದೇವಿ ತಾಳಿಕೋಟಿಮಠ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಆಗಮಿಸಿಲಿದ್ದಾರೆ.
ಕ.ಸಾ.ಪ.ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಸಾಹಿತಿಗಳು, ಕಲಾವಿದರು, ಬೆಳಗಾವಿ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು ಮತ್ತು ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆತರಬೇಕೆಂದು, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಹಾಗೂ ಕಸಾಪ ಬೈಲಹೊಂಗಲ ತಾಲೂಕಾಧ್ಯಕ್ಷರಾದ ಶ್ರೀ ಎನ್ ಆರ್ ಠಕ್ಕಾಯಿ ಅವರು ವಿನಂತಿಸಿಕೊಂಡಿದ್ದಾರೆ.


Gadi Kannadiga

Leave a Reply