This is the title of the web page
This is the title of the web page

Please assign a menu to the primary menu location under menu

State

ಅಹವಾಲು ಸ್ವೀಕಾರ


ಗದಗ ಡಿಸೆಂಬರ್ ೧೨: ಕರ್ನಾಟಕ ಲೋಕಾಯುಕ್ತ, ಗದಗ ಕಛೇರಿಯ ಪೊಲೀಸ್ ಅಧಿಕಾರಿಗಳು ಈ ಕೆಳಕಂಡ ದಿನಾಂಕಗಳಂದು ಕೆಳಕಂಡ ತಾಲ್ಲೂಕುಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ದೂರು/ಅಹವಾಲುಗಳನ್ನು ಸ್ವೀಕರಿಸುವರು.
ಪೊಲೀಸ ಉಪಾಧೀಕ್ಷಕರಾದ ಶಂಕರ ಎಂ.ರಾಗಿ ಅವರು ಡಿಸೆಂಬರ್ ೨೦ ರಂದು ಬೆ ೧೧ ರಿಂದ ಮ. ೧ ರವರೆಗೆ ಗದಗ ಕನಾಟಕ ಲೋಕಾಯುಕ್ತ, ಪೊಲೀಸ ಉಪಾಧೀಕ್ಷಕರ ಕಚೇರಿಯಲ್ಲಿ , ಪೊಲೀಸ ಇನ್ಸೆಪೆಕ್ಟರ್ ರವಿ ಪುರುಷೋತ್ತಮ್ ಅವರು ಡಿಸೆಂಬರ್ ೨೧ ರಂದು ಬೆ ೧೧ ರಿಂದ ಮ.೧ ರವರೆಗೆ ಶಿರಹಟ್ಟಿ ತಹಶೀಲ್ದಾರರ ಕಚೇರಿ ಸಭಾಭವನದಲ್ಲಿ, ಪೊಲೀಸ ಇನ್ಸೆಪೆಕ್ಟರ್ ಎ.ಆರ್. ಕಲಾದಗಿಯವರು ಡಿ.೨೧ ರಂದು ಬೆ ೧೧ ರಿಂದ ಮ. ೧ ರವರೆಗೆ ಮುಂಡರಗಿ ತಾಲೂಕು ಪಂಚಾಯತ್ ಸಭಾಭವನದಲ್ಲಿ, ಪೊಲೀಸ ಇನ್ಸಪೆಕ್ಟರ್ ರವಿ ಪುರುಷೋತ್ತಮ ಅವರು ಡಿಸೆಂಬರ್ ೨೨ ರಂದು ಬೆ ೧೧ ರಿಂದ ಮ.೧ ರವರೆಗೆ ರೋಣ ತಾಲೂಕು ಪಂಚಾಯತ್ ಸಭಾಭವನದಲ್ಲಿ, ಪೊಲೀಸ್ ಇನ್ಸಪೆಕ್ಟರ್ ಎ.ಆರ್.ಕಲಾದಗಿಯವರು ಡಿಸೆಂಬರ್ ೨೨ ರಂದು ಬೆ ೧೧ ರಿಂದ ಮ.೧ರವರೆಗೆ ನರಗುಂದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು ಎಂದು ಕರ್ನಾಟಕ ಲೋಕಾಯುಕ್ತ ಆರಕ್ಷಕ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply