ಗಡಿ ಕನ್ನಡಿಗ
ಖಾನಾಪುರ:ತಾಲೂಕಿನ ಕೇರವಾಡ ಗ್ರಾಮದ ಸಾವಯವ ರೈತ ಎಂದೇ ಖ್ಯಾತಿ ಪಡೆದಿರುವ ಶಂಕರ ಲಂಗಟಿ ಸಾವಯವ ಕೃಷಿ ಸಂಶೋಧಕರು,ಭತ್ತದ ಸಂಶೋದಕರು ಎಂದು ನಾನು ಪ್ರಶಸ್ತಿಗಳನ್ನ ಸಹ ಗಿಟ್ಟಿಸಿಕೊಂಡಿದ್ದಾರೆ ಆದರೆ ಅಸಲಿಗೆ ಅವರೇ ಹೇಳುವದೇ ಬೇರೆ ನಾನು ಪೂರ್ಣ ಪ್ರಮಾಣದ ಸಾವಯವ ಕೃಷಿಕನಲ್ಲ ಎಂದು ಗಡಿ ಕನ್ನಡಿಗ ಪತ್ರಿಕೆ ಸಂದರ್ಶನದಲ್ಲಿ ಹೇಳಿಕೊಂಡು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಧಾರವಾಡ ಕೃಷಿ ವಿದ್ಯಾಲಯದಿಂದ ದೊರೆತ ಗೌರವ ಡಾಕ್ಟರೇಟ್ ಬಗ್ಗೆ ಸಂದರ್ಶನಕ್ಕೆ ಹೋದ ಸಂದರ್ಶನದಲ್ಲಿ ಸ್ವತಃ ಶಂಕರ ಲಂಗಟಿಯವರೇ ನನ್ನ ತಂದೆಯ ಕಾಲದಿಂದಲೂ ನಾವು ವಿವಿಧ ದೇಶಿ ಭತ್ತದ ತಳಿ ಸಂರಕ್ಷಣೆ ಮಾಡುತ್ತ ಬಂದಿದ್ದು ಅದರಂತೆ ನಾನು ದೇಶಿ ಭತ್ತದ ತಳಿಗಳನ್ನ ರಕ್ಷಣೆ ಮಾಡುತ್ತ ಬಂದಿದ್ದು ನಿಜ ಆದರೆ ನಮ್ಮ ಗೊದಾಮಿನಲ್ಲಿ ಸಿಗುವದು ಯಾವುದೂ ಪೂರ್ಣ ಪ್ರಮಾಣದ ಸಾವಯವ ಸಾಮಗ್ರಿಗಳಲ್ಲ ಜನರಿಗೆ ಅದರ ಬಗ್ಗೆ ತಪ್ಪು ಕಲ್ಪನೆ ಬೇಡ ಎಂದಿದ್ದಾರೆ.
*ಜನರಿಗೆ ಸಾವಯವ ಸಾಮಗ್ರಗಳೆಂದು ಮೋಸ ಮಾಡಿದರಾ ಶಂಕರ ಲಂಗಟೆ..?*
ಇತ್ತೀಚಿನ ದಿನಗಳಲ್ಲಿ ಜನ ಮತ್ತೆ ಪುರಾತನ ಆಹಾರ ಪದ್ದತಿಯತ್ತ ಮಾರುಹೋಗುತ್ತಿದ್ದು ಅದರ ಲಾಭ ಪಡೆದ ಶಂಕರ ಲಂಗಟೆ ಅದನ್ನೇ ಉದ್ಯೋಗವಾಗಿ ಪರಿವರ್ತಿಸಿಕೊಂಡು ಸುತ್ತಮುತ್ತಲಿನ ಸಾಕಷ್ಟು ಜನರಿಗೆ ಮೋಸ ಮಾಡಿ ಸಾಮಗ್ರಿಗಳನ್ನ ವಿತರಿಸಿದರಾ ಎನ್ನುವ ಪ್ರಶ್ನೆ ಮೂಡುವದು ಸುಳ್ಳಲ್ಲ ಅದಕ್ಕೆ ಉತ್ತರಿಸಿದ ಶಂಕರ ಲಂಗಟೆ ಹೌದು ಅದು ಜನರ ತಪ್ಪು ಕಲ್ಪನೆ ನಾನೆಲ್ಲೂ ನಮ್ಮಲ್ಲಿ ಸಾವಯವ ಪದಾರ್ಥಗಳು ಸಿಗುತ್ತವೆ ಎಂದು ಹೇಳಿಕೊಂಡಿಲ್ಲ ಆದರೆ ಅದು ಜನರೇ ತಪ್ಪು ಕಲ್ಪನೆಯೊಮನದಿಗೆ ನಮ್ಮಲ್ಲಿಗೆ ಬಂದು ಸಾಮಗ್ರಿಗಳನ್ನು ಕರೀದಿಸುತ್ತಾರೆ ಅದು ನಮ್ಮ ತಪ್ಪಲ್ಲ ಎಂದು ಜನರ ಮೇಲೆ ಎತ್ತಿ ಹಾಕಿದ್ದಾರೆ.
*ಹಾಗದರೆ ಸಾವಯವ ಕೃಷಿಕ ಎಂದು ಹೇಳಿಕೊಂಡು ಪಡೆದ ಪ್ರಶಸ್ತಿಗಳ ಕಥೆಯೇನು..?
ಹೌದು ಅವರೇ ಹೇಳಿದಂತೆ ಶಂಕರ ಲಂಗಟೆಯವರು ಪೂರ್ಣಪ್ರಮಾಣದ ಸಾವಯವ ಕೃಷಿಕನಲ್ಲ ಎಂದ ಮೇಲೆ ಸಾವಯವ ರೈತ ಎಂದು ಪಡೆದ ಪ್ರಶಸ್ತಿಗಳನ್ನ ವಾಪಸ್ ಮಾಡಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬರುತ್ತದ್ದು ಶಂಕರ ಲಂಗಟೆಯವರು ಜನರ ಭಾವನೆಗಳ ಜೊತೆ ಆಟವಾಡಿದ್ದು ಸರಿಯಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದು ಸುಳ್ಳಲ್ಲ.
(ಶಂಕರ ಲಂಗಟೆಯವರ ಜೊತೆಗಿನ ಸಂದರ್ಶನದ ಪೂರ್ಣ ವಿಡಿಯೋ ಕೆಲವೆ ದಿನಗಳಲ್ಲಿ ನಿಮ್ಮ ಮುಂದೆ ನಿರೀಕ್ಷಿಸಿ)
ವರದಿ:ಪರಶುರಾಮ ಮಾದರ
ಖಾನಾಪುರ