ಯಮಕನಮರಡಿ:- ಕರೋನಾ ವೇಳೆಯಲ್ಲಿ ಅಂಗನವಾಡಿ ಕಾರ್ಯಕರ್ತರು ತಮ್ಮ ಪ್ರಾಣದ ಹಂಗು ತೊರೆದು ಮನೆ ಮನೆಗೆ ತೆರಳಿ ಜನರ ಸೇವೆ ಮಾಡಿದ್ದು, ಈಗ ನಮಗೆ ಅಂಗನವಾಡಿ ಮಹತ್ವದ ಕುರಿತು ಅರಿವುವಾಗುತ್ತಿದೆ ಎಂದು ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ £ಖಿಲ ಕತ್ತಿ ಹೇಳಿದರು.
ಅವರು ಗುರುವಾರ ದಿ. ೧೨ ರಂದು ಸಮೀಪದ ಹುನ್ನೂರ ಗ್ರಾಮದಲ್ಲಿ ಹೊಸದಾಗಿ ಮಂಜೂರಾಗಿರುವ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತರು ಮಕ್ಕಳಿಗೆ ಪೌಷ್ಠಿಕ ಆಹಾರ £Ãಡಿ ಆರೋಗ್ಯವಂತರನ್ನಾಗಿ ಸದೃಡರ ನ್ನಾಗಿ ನೋಡಿಕೊ ಳ್ಳುವುದರ ಜೊತೆಗೆ ಮಕ್ಕಳ ಶಿಕ್ಷಣದ ವಿಕಸನಕ್ಕೆ ಕಾರ್ಯ ಮಾಡುತ್ತಿದ್ದಾರೆ ಎಂದು £ಖಿಲ ಕತ್ತಿ ಹೇಳಿ ತಮ್ಮ ತಂದೆವರಾದ ದಿ. ಉಮೇಶ ಕತ್ತಿಯವರು ಹುಕ್ಕೇರಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದು, ಸರ್ಕಾರದ ಪ್ರತಿಯೊಂದು ಜನಪರ ಯೋಜನೆಗಳನ್ನು ಗ್ರಾಮಗಳಿಗೆ ಮುಟ್ಟಿಸಿದ್ದಾರೆ. ಅವರು ಕಂಡ ಹುಕ್ಕೇರಿ ಮಾದರಿ ಕ್ಷೇತ್ರ ಕಾರ್ಯವನ್ನು ಕತ್ತಿ ಕುಟುಂ ಬದವರು ಮುಂದುವರೆಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಶಶಿಕಾಂತ ದೊಡ್ಡಲಿಂಗನವರ, ಯರನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಳಪ್ಪ ಘಸ್ತಿ, ಹೊಸೂರ ಗ್ರಾ.ಪಂ.ಸದಸ್ಯೆ ರಾಜಶ್ರೀ ಈರಗಾರ, ಗುರುಸಿದ್ದ ಪೂಜೇರಿ, ಪಿಡಿಓ ಮಲ್ಲಿಕಾರ್ಜುನ ಗುಡಸಿ, ಗ್ರಾಮದ ಹಿರಿಯರಾದ ಸಿಂಗಾಡಿ ಪೂಜೇರಿ, ಮುತ್ತೆಪ್ಪಾ ಪೂಜೇರಿ, ವಿಠ್ಠಲ ಬಂತಿ, ಬಿ.ವಾಯ್. ಹೊಸಮ£, ಮೇಲ್ವಿಚಾರಕಿ ಅಶ್ವಿ£ ಕರನೂರೆ, ಅಂಗನವಾಡಿ ಕಾರ್ಯಕರ್ತೆಯರಾದ ಎಚ.ಡಿ. ಡೋಣಿ, ರೇಖಾ, ಆಶಾ, ಸುಜಾತಾ, ಸಹಾಯಕಿರಾದ ಫಾತೀಮಾ, ಲಕ್ಕವ್ವಾ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Gadi Kannadiga > Local News > ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯ : ನಿಖಿಲ ಕತ್ತಿ