ಕೊಪ್ಪಳ ಜನವರಿ ೧೦ : ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಉಚ್ಚಲಕುಂಟಾ ಗ್ರಾಸಮದ ನಿವಾಸಿ ೪೦ ವರ್ಷ ವಯಸ್ಸಿನ ಈಶ್ವರಯ್ಯ ತಂದೆ ಲಿಂಗಯ್ಯ ನಂದಾಪೂರ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಬೇವೂರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಉಚ್ಚಲಕುಂಟಾ ಗ್ರಾಸಮದ ನಿವಾಸಿ ೪೦ ವರ್ಷ ವಯಸ್ಸಿನ ಈಶ್ವರಯ್ಯ ತಂದೆ ಲಿಂಗಯ್ಯ ನಂದಾಪೂರ ಎಂಬ ವ್ಯಕ್ತಿಯು ೨೦೨೨ರ ನವೆಂಬರ್ ೨೪ ರಂದು ಬೆಳಿಗ್ಗೆ ೦೯-೩೦ ಗಂಟೆಯ ಸುಮಾರಿಗೆ ಯಾವುದೋ ಕಾರಣಕ್ಕೆ ಮಸಬಹಂಚಿನಾಳ ಗ್ರಾಮದ ತಮ್ಮ ಸಂಬಂಧಿಕರ ಮನೆಯಿಂದ ಕಾಣೆಯಾಗಿ ಹೋಗಿದ್ದು, ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ. ಈ ಕುರಿತು ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದ ವ್ಯಕ್ತಿಯು ೫’ ೨’’ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋದಿ ಮೈಬಣ್ಣ, ಕಾಣೆಯಾದಾಗ ಕರಿ ಪ್ಯಾಂಟ್, ಗುಲಾಬಿ ಕಲರ್ ಶರ್ಟ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಈ ಚಹರೆಯ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದಲ್ಲಿ ಅಥವಾ ಈತನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಪಿ.ಎಸ್.ಐ ಬೇವೂರ ಪೊಲೀಸ್ ಠಾಣೆ (೯೪೮೦೮೦೩೭೫೧) & (೦೮೫೩೪-೨೨೭೬೪೧) ಅಥವಾ ಕಂಟ್ರೋಲ್ ರೋಮ್ ಕೊಪ್ಪಳ (೦೮೫೩೯-೨೨೦೨೨೨), ಇಲ್ಲಿಗೆ ಮಾಹಿತಿ ನೀಡಲು ಕೋರಿದೆ. ಹಾಗೂ ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದಲ್ಲಿ ನಗದು ಬಹುಮಾನ ನೀಡಲಾಗುವುದು ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
Gadi Kannadiga > State > ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ