ಗದಗ ಡಿಸೆಂಬರ್ ೨೮: ೨೦೨೨-೨೩ನೇ ಸಾಲಿಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ (ಸಿ.ಎಮ್.ಕೆ.ಕೆ.ವಾಯ್) ಯೋಜನೆಯಡಿಯಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಗದಗ ಇವರ ವತಿಯಿಂದ ನೀಡಿರುವ ಆದೇಶದಂತೆ ಈ ಕೆಳಗೆ ಕಾಣಿಸಿದ ತರಬೇತಿಗಳಿಗೆ ಉಚಿತ ತರಬೇತಿಯನ್ನು ನೀಡಲು ಅರ್ಜಿ ಕರೆಯಲಾಗಿದೆ.
ಸಾಪ್ಲಿಂಗ್ ಟೇಲರ-೮ನೇ ತರಗತಿ ಪಾಸ, ಸೆಲ್ಪ್ ಎಂಪ್ಲಾಯಿಡ್ ಟೇಲರ-೮ನೇ ತರಗತಿ ಪಾಸ್, ಡೋಮೆಸ್ಟಿಕ್ ಡಾಟಾ ಎಂಟ್ರಿ ಆಫರೇಟರ್-೧೦ನೇ ತರಗತಿ ಪಾಸಾದ ಮತ್ತು ೧೮ ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಮೆ|| ಸ್ವಾಮಿ ವಿವೇಕಾನಂದ ಶಿಕ್ಷಣ ಗ್ರಾಮೀಣಾಭಿವೃದ್ದಿ ಹಾಗೂ ವಿವಿದ್ದೋದೇಶಗಳ ಸಂಘ, ಮುಂಡರಗಿ ಈ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತರಬೇತಿ ಕೆಂದ್ರದ ಮುಖ್ಯಸ್ಥರಾದ ಲಿಂಗನಗೌಡ ಹರ್ತಿ, ಮೊಬೈಲ್ ಸಂಖ್ಯೆ:೯೯೮೦೭೫೦೮೪೦ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಉಚಿತ ಕೌಶಲ್ಯ ತರಬೇತಿಗಳಿಗಾಗಿ ಅರ್ಜಿ ಆಹ್ವಾನ