ಗಡಿ ಕನ್ನಡಗ
ಖಾನಾಪುರ:ನಿರಂತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲಪ್ರಭೆ ಮೈದುಂಬಿ ಹರಿಯುತ್ತಿದ್ದಾಳೆ.ಖಾನಾಪುರದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ತಾಲೂಕಿನ ಅಸೋಗಾದಲ್ಲಿರುವ ರಾಮಲಿಂಗ ದೇವಸ್ಥಾನದ ಪಕ್ಕ ಕಲ್ಲುಗಳ ಮಧ್ಯೆ ಹರಿಯುವ ಮಲಪ್ರಭೆಯನ್ನ ನೋಡಲು ಎರಡು ಕಣ್ಣು ಸಾಲದು ಇಲ್ಲಿ ಮಲಪ್ರಭೆ ಮೈದುಂಬಿ ಹರಿಯುತ್ತಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.
ಮಳೆಯ ಆರ್ಭಟ ಮುಂದುವರಿದಿದ್ದು, ದಿನದಿಂದ ದಿನಕ್ಕೆ ನದಿಯ ನೀರಿನ ಮಟ್ಟ ಹೆಚ್ಚುತ್ತಿದೆ. ಸದ್ಯ ಖಾನಾಪುರ ಪಟ್ಟಣದಲ್ಲಿ ಬಳಿಯ ನದಿಯಲ್ಲಿ ಅಡ್ಡಲಾಗಿರುವ ಬ್ರಿಜ್ ಕಂ ಬ್ಯಾರೇಜ್ ಮುಳುಗಡೆಯಾಗಿದ್ದು ನದಿ ಮಟ್ಟ ದಿನದಿಂದ ದಿನಹೆಚ್ಚುತ್ತಿದೆ ಜಿಲ್ಲೆಯಲ್ಲೇ ಖಾನಾಪುರ ತಾಲೂಕನ್ನು ಬೆಳಗಾವಿಯ ಕಾಶ್ಮೀರ ಎಂದು ಕರೆಯಲಾಗುತ್ತದೆ ಹೀಗಾಗಿ ಮಳೆಗಾಲದಲ್ಲಿ ಖಾನಾಪುರ ತಾಲೂಕಿನತ್ತ ಪ್ರವಾಸಿಗರ ದಂಡು ಹರಿದುಬವದು ಸಹಜ ಅಂತಹ ಪ್ರವಾಸಿ ತಾಣಗಳಲ್ಲಿ ಅಸೋಗಾ ಗ್ರಾಮದ ರಾಮಲಿಂಗ ದೇವಸ್ಥಾನವು ಒಂದಾಗಿದ್ದು ಇದೇ ಸ್ಥಳದಲ್ಲಿ ಈ ಹಿಂದೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಚಿತ್ರದ ಹಾಡು ಚಿತ್ರೀಕರಣದವಾಗಿದ್ದನ್ನ ನಾವು ನೆನೆಯಬಹುದು.