This is the title of the web page
This is the title of the web page

Please assign a menu to the primary menu location under menu

State

ದನಗಳ ಮಾಲೀಕರ ಗಮನಕ್ಕೆ


ಗದಗ ಜನೆವರಿ ೨೧: ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬೀದಿ ದನಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವುದಾಗಿ ನಗರಸಭೆ ಕಾರ್ಯಲಯಕ್ಕೆ ಸಾಕಷ್ಟು ಸಾರ್ವಜನಿಕ ದೂರುಗಳು ಸ್ವೀಕೃತವಾಗಿವೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿ ಸದರ ಬೀದಿ ದನಗಳನ್ನು ಹಿಡಿದು ಶ್ರೀ ಶಿವಯೋಗಿ ಮಂದಿರದ ಪಶುಪಾಲನಾ ಕೇಂದ್ರ ಇಲ್ಲಿ ಸ್ಥಳಾಂತರಿಸಲು ತೀರ್ಮಾನಿಸಿ ಠರಾವು ಪಾಸು ಮಾಡಲಾಗಿದೆ. ಗದಗ-ಬೆಟಗೇರಿ ನಗರಸಭೆ ವತಿಯಿಂದ ಟೆಂಡರ್ ಕರೆದು ಸದರಿ ಬೀದಿ ದನಗಳನ್ನು ಹಿಡಿದು ಸ್ಥಳಾಂತರಿಸಲು ತಿರ್ಮಾನಿಸಲಾಗಿದೆ. ಒಂದು ವೇಳೆ ದನಗಳ ಮಾಲೀಕರು ತಮ್ಮ ದನಗಳನ್ನು ಬೀದಿಯಲ್ಲಿ ಬಿಟ್ಟ ಪಕ್ಷದಲ್ಲಿ ಸದರಿ ದನಗಳನ್ನು ಜನೆವರಿ ೨೬ ರೊಳಗಾಗಿ ತಮ್ಮ ತಾಬಾಕ್ಕೆ ತೆಗೆದುಕೊಳ್ಳತಕ್ಕದ್ದು . ಇಲ್ಲದಿದ್ದಲ್ಲಿ ಗದಗ-ಬೆಟಗೇರಿ ನಗರಸಭೆ ಜವಾಬ್ದಾರಿಯಾಗುವುದಿಲ್ಲ ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply