ಯಮಕನಮರಡಿ:- ವಿದ್ಯಾರ್ಥಿಗಳಿಗೆ ಮನವರಿಕೆಯಾಗುವಂತೆ ಪಾಠಗಳನ್ನು ಬೋಧಿಸಿ ಉತ್ತಮ ಗುಣಾತ್ಮಕ ಶಿಕ್ಷಣ £Ãಡಲು ಶಿಕ್ಷಕರು ಪ್ರಾಮಾಣಿಕವಾಗಿ £ಷ್ಠೆಯಿಂದ ಪ್ರಯತ್ನಿಸಬೇಕೆಂದು ಸಮನ್ವಯಾಧಿಕಾರಿ ಎ.ಎಸ್. ಪದ್ಮನ್ನವರ ಹೇಳಿದರು.
ಅವರು ಶುಕ್ರವಾರ ದಿ. ೦೨ ರಂದು ಹಿಡಕಲ್ ಡ್ಯಾಮ ಸಮೂಹದ ಶಿಕ್ಷಕರ ಗುರುಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ £Ãಡಿ ಮಾತನಾಡಿದರು. ಶಿಕ್ಷಕರು ತಮ್ಮ ತಮ್ಮ ಸೇವಾ ಪುಸ್ತಕಗಳನ್ನು ಸರಿಯಾಗಿ ಪರಿಶೀಲಿಸಿ ಮಾಹಿತಿಗಳು ಸರಿ ಇವೆ ಇಲ್ಲವೋ ಎಂಬುವುದನ್ನು ಖಚಿತ ಪಡಿಸಿಕೊಳ್ಳಬೇಕು ಸೇವಾ ಮಾಹಿತಿಗಳನ್ನು ಸೇರಿಸಬೇಕಾದರೆ ಅವುಗಳ ಪಟ್ಟಿಯನ್ನು ಮಾಡಿ ತಿಳಿಸಿಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಕ್ಕೇರಿ ತಾಲೂಕಾಧ್ಯಕ್ಷ ಎನ್.ಎಸ್. ದೇವರಮ£ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಶಿಕ್ಷಕರ ವೇತನ ಮತ್ತಿತರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಶಿಕ್ಷಕರ ದ್ವ£ಯಾಗಿ ಕೆಲಸ ಮಾಡುತ್ತೇನೆ. ಶಿಕ್ಷಕರು ತಮ್ಮ ಕೆಲಸ ಕಾರ್ಯಗಳಿಗೆ ತಾಲೂಕಾ ಕೇಂದ್ರದ ಶಿಕ್ಷಣ ಇಲಾಖೆಗೆ ಅಲೆದಾಡುವುದನ್ನು ತಪ್ಪಿಸಲು ನಾನು ಕೆಲಸ ಮಾಡುತ್ತೇನೆ. ಇನ್ನುಳಿದ ತಾಲೂಕುಗಳಲ್ಲಿ ಶಿಕ್ಷಣಕ್ಕೆ ಸಂಬಂದಪಟ್ಟ ಸೇವೆಗಳು ನಡೆದರೆ ಹುಕ್ಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಶಿಕ್ಷಕರಿಗೆ ತ್ವರಿತಗತಿಯಲ್ಲಿ ಕೆಲಸಗಳು ಆಗುತ್ತಿವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಸ್. ಸರಿಕರ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಉಮಾದೇವಿ ಪಡೆಪ್ಪನವರ, ಹಿಡಕಲ್ ಡ್ಯಾಂ ಆರ್.ಎ. ಮಿತ್ರನ್ನವರ, ಎಸ್.ಜಿ. ಶಿಲ್ಲೆದಾರ, ಮುಂತಾದವರು ಉಪಸ್ಥಿತರಿದ್ದರು. £ರ್ದೇಶಕರಾದ ರಾಜು ತಳವಾರ ಕಾರ್ಯಕ್ರಮ £ರೂಪಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಎಚ್.ಬಿ. ನಾಗಪ್ಪಗೋಳ, ಎನ್.ಎ. ಪಾಟೀಲ, ಬಿ.ಬಿ.ವಾಳೆದವರ, ಎಸ್.ಎಸ್ ವಾಲಿಕಾರ, ಶ್ರೀಮತಿ ಜೋಡಟ್ಟಿ, ಆರ್.ಕೆ. ಬಾಂದುರಕರ, ಶ್ರೀಮತಿ ಗರಮ ಪಲ್ಲಿ, ಶ್ರೀಮತಿ ಬಿ.ಡಿ. ಅಂಗಡಿ, ಹಿಡಕಲ್ ಸಿ.ಆರ್.ಪಿ. ವಲಯದ ಎಲ್ಲ ಶಿಕ್ಷಕರು ಗುರುಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Gadi Kannadiga > Local News > ವಿದ್ಯಾರ್ಥಿಗಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ £Ãಡಿ : ಎ.ಎಸ್. ಪದ್ಮನ್ನವರ