ಯಮಕನಮರಡಿ:- ಮಕ್ಕಳೇ ದೇಶದ ಸಂಪತ್ತು ನವಸಮಾಜ £ರ್ಮಾಣದಲ್ಲಿ ಮಕ್ಕಳ ಪಾತ್ರ ಬಹು ಮುಖ್ಯ ಕುಟುಂಬದ ಸಮಾಜದ ದಾರಿದೀಪ ಮಕ್ಕಳು ದೇಶಕ್ಕೆ ಬೆಳಕಾಗಬೇಕು ಎಂದು ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಅವಲಕ್ಕಿ ಹೇಳಿದರು. ಕುಂದರಗಿಯ ನೈಸರ್ಗಿಕ ಕೃಷಿ ತಜ್ಞ ಸಾಹಿತಿಗಳಾದ ಮಹೇಶ ದೇಶಪಾಂಡೆ “ಚಿನ್ನರÀ ಲೋಕ” ತಮ್ಮ ಸ್ವರಚಿತ ಕವನ, “ತರುಣಾಗೆ ಕಿವಿ ಮಾತು” ಎಂಬ ಕವನಗಳನ್ನು ಪ್ರಸ್ತುತ ಪಡಿಸಿ ವಿದ್ಯಾರ್ಥಿಗಳು ಕೆಟ್ಟ ಚಟಗಳಿಗೆ ದಾಸರಾಗದೇ ಉತ್ತಮ ಸಂಸ್ಕೃತಿ, ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕಿಂತ ಮುಂಚೆ ಮಕ್ಕಳನ್ನು ಪುಷ್ಪಾರ್ಚನೆ ಮಾಡುವದರೊಂದಿಗೆ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. ಮುಖ್ಯ ಶಿಕ್ಷಕ ಉದಯಕುಮಾರ ಕಮ್ಮಾರ ಅವರು ಮಕ್ಕಳ ಪಾದಪೂಜೆ ಮಾಡಿ ಸಾದನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾ£ಸಿದರು. ಬಲ್ಲೆ ಎಸೆತದಲ್ಲಿ ರಾಜ್ಯ ಮಟ್ಟದ ಆಯ್ಕೆಯಾದ ವಿದ್ಯಾರ್ಥಿಯನ್ನು ಸತ್ಕರಿಸಿದರು. £ವೃತ್ತ ಶಿಕ್ಷಕರಾದ ಪಿ.ಎಸ್.ಹತ್ತಿ, ಜಿ.ಎಸ್.ಹಿರೇಕೂಡಿ, ವಾಯ್.ಆರ್. ಕಟ್ಟಿಮ£, ಬಿ.ಕೆ. ಯರಗಟ್ಟಿ ಇವರನ್ನು ಸನ್ಮಾಸಲಾಯಿತು. ಕರ್ನಾಟಕಪತ್ರಕರ್ತರ ಸಂಘ ಹುಕ್ಕೇರಿ ತಾಲೂಕಾಧ್ಯಕ್ಷ ರವೀಂದ್ರ ಜಿಂಡ್ರಾಳಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾ£ಸಲಾಯಿತು.
ಗುತ್ತಿಗೆದಾರ ಲಗಮಣ್ಣಾ ಕೊಂಡಿಯವರು ತಮ್ಮ ತಂದೆ ಸ್ಮರಣಾರ್ಥ ಶಾಲಾ ಮಕ್ಕಳಿಗೆ ೭೦ ಬ್ಯಾಗಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಸರ್.ವಿಶ್ವೇಶ್ವರಯ್ಯ ಪ್ರೌಢಶಾಲೆಯ ಅಧ್ಯಕ್ಷ ಬಸವರಾಜ ಖಡಕಬಾಂವಿ, ಕರ್ನಾಟಕ ರಾಜ್ಯ ವಚನÀ ಸಾಹಿತ್ ಪರಿಷತ ಅಧ್ಯಕ್ಷ ಎಸ್.ಎಮ್. ಶಿರೂರ, ಹಿರಿಯ ಸಾಹಿತಿ ಕಾ.ಹೊ. ಶಿಂಧೆ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹುಕ್ಕೇರಿ ತಾಲೂಕಾಧ್ಯಕ್ಷ ಪ್ರಕಾಶ ಹೊಸಮ£, ಶಿಕ್ಷಕ ಸಿ.ಎಮ್. ದರ್ಬಾರೆ, ಗುತ್ತಿಗೆದಾರ ಗುರುಸಿದ್ದ ಮೂಡಲಗಿ, ಮುಖ್ಯ ಶಿಕ್ಷಕರಾದ ಬಿ.ಆರ್. ಸರನೋಬತ್, ಎ.ವ್ಹಿ. ಹೆಬ್ಬಾಳಿ, ವಿಜಯ ಮೇಲಗೇರಿ, £ವೃತ್ತ ಶಿಕ್ಷಕ ಬಿ.ಎಸ್. ಮಾನೆ, ಶಿಕ್ಷಕರಾದ ಎಸ್.ಬಿ. ಶಿವನಗೋಳ, ಎಸ್.ವಾಯ್ ಕಾಂಬಳೆ, ಬಿ.ಎಸ್. ನಾಗನೂರಿ, ವಿದ್ಯಾರ್ಥಿಗಳಾದ ಮಹಾಂತೇಶ ರಾಮಾಪೂರಿ, ವಿಜಯ ಕುಷ್ಟನವರ, ಮಹೇಶ ಪೂಜರಿ, ವಿನಾಯಕ ಗುಡದವರ, ರಾಧಿಕಾ ಎಮ್ಮಾö್ಯಗೋಳ, ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಮಾಳಪ್ಪ ನಾಗರಾಳಿ ವಹಿಸಿದ್ದರು. ಶಿಕ್ಷಕಿ ಎಸ್.ಆಯ್. ಮುಲ್ಲಾ ಕಾರ್ಯಕ್ರಮ £ರೂಪಿಸಿದರು. ಜೆ.ಎಸ್. ಪಾಟೀಲ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕ ಎಸ್.ಆರ್. ಕುಂದರಗಿ ವಂದಿಸಿದರು.
Gadi Kannadiga > Local News > ಮಕ್ಕಳೇ ನವಸಮಾಜ ನಿರ್ಮಾಣಕ್ಕೆ ದಾರಿದೀಪ :ಅವಲಕ್ಕಿ