ಚಿಂಚಣಿ : ಕರ್ನಾಟಕ ಮಹಾರಾಷ್ಟ್ರ ನಡುವೆ ಇರುವ ಗಡಿ ವಿವಾದಕ್ಕೆ ಸಂಬoಧಪಟ್ಟoತೆ
ಇತ್ತೀಚಿಗೆ ಕೇಂದ್ರ ಸಚಿವ ಅಮಿತ್ ಷಾ ಅವರ ನೇತೃತ್ವದಲ್ಲಿ ನಡೆದ ಉಭಯ ರಾಜ್ಯಗಳ
ಮುಖ್ಯಮಂತ್ರಿಗಳ ಸಭೆಯಲ್ಲಿ ಕೇಂದ್ರ ಸರ್ಕಾರವು ತಳೆದಿರುವ ತಟಸ್ಥ ನಿಲುವು ಸರಿಯಲ್ಲ
ಮತ್ತು ಗಡಿಭಾಗದ ಜನಪ್ರತಿನಿಧಿಗಳ ನಿಲಕ್ಷ ಧೋರಣೆ ಸಹಿಸಲಾಗದು ಎಂದು ಚಿಂಚಣಿ ಸಿದ್ಧ
ಸಂಸ್ಥಾನ ಮಠದ ಶ್ರೀ.ಅಲ್ಲಮಪ್ರಭು ಮಹಾಸ್ವಾಮಿಗಳು ಅಕ್ಷೇಪ ವ್ಯಕ್ತಪಡಿಸಿದ್ದಾರೆ.
೧೫ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರೂ ಆಗಿರುವ
ಅವರು ಚಿಂಚಣಿ ಶ್ರೀ.ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಕೇಂದ್ರ
ಸರ್ಕಾರವು ಈ ಸಂಬAಧ ಗಟ್ಟಿಯಾದ ನಿಲುವನ್ನು ತಳೆಯಬೇಕಿತ್ತು ಈ ರೀತಿಯ ತಟಸ್ಥ ನಿಲುವು
ಮಹಾರಾಷ್ಟ್ರಿಗರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಅದಕ್ಕೆ ಬದಲಾಗಿ ಒಂದು ಗಡುವನ್ನು
ನಿಗದಿಪಡಿಸಿ ಅದೇ ಕಾಲಮಿತಿಯಲ್ಲಿ ಸಮಸ್ಯೆಯನ್ನು ಅವರು ಶಾಶ್ವತವಾಗಿ
ಪರಿಹರಿಸಬೇಕಿತ್ತು ಎಂದ ಅವರು ಕರ್ನಾಟಕ ಸರ್ಕಾರ ಕೂಡ ಈ ವಿಷಯದಲ್ಲಿ ಅತ್ಯಂತ
ಗಟ್ಟಿಯಾದ ನಿಲುವನ್ನು ತಳೆದು ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ತರಬೇಕು ಎಂದವರು
ಹೇಳಿದರು.
ಮಹಾಜನ ವರದಿ ಅತ್ಯುತ್ತಮವಾದ ವರದಿ ಅದನ್ನು ಎರಡು ರಾಜ್ಯಗಳವರು ಒಪ್ಪಬೇಕಿತ್ತು, ಆದರೆ
ಬೆಳಗಾವಿ ಮತ್ತು ಬೀದರ್ ನಗರಗಳಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದವರು ತಕರಾರು
ತೆಗೆದರು ಗಡಿಭಾಗದಲ್ಲಿರುವ ಶ್ರೀಸಾಮಾನ್ಯರಿಗೆ ಗಡಿ ವಿವಾದ ಬೇಕೆ ಆಗಿಲ್ಲ
ಗಡಿಭಾಗದಲ್ಲಿ ಭಾಷಾ ಬಾಂಧವ್ಯಕ್ಕಾಗಲಿ ಯಾವುದೇ ರೀತಿಯ ಧಕ್ಕೆ ಇಲ್ಲ ಗಡಿ ಭಾಗದಲ್ಲಿ
ಭಾಷೆಯನ್ನು ಮತ್ತು ಗಡಿಯನ್ನು ಮೀರಿ ಸಂಬAಧಗಳು ಬೆಳೆದಿವೆ ಭಾಷಾ ವಿವಾದ ಕೆಲವೇ
ಕೆಲವರಿಂದ ಕೆದಕಿದಾಗ ಗಡಿ ಭಾಗದಲ್ಲಿರುವ ಜನಪ್ರತಿನಿಧಿಗಳು ಮಾತನಾಡುವುದಿಲ್ಲ
ತಟಸ್ಥರಾಗುತ್ತಾರೆ ಬದಲಾಗಿ ಕೇವಲ ಮತಗಳಿಗಾಗಿ ಮರಾಠಿಗರನ್ನು ಓಲೈಸುವ ಕಾರ್ಯವನ್ನು
ಮಾಡುತ್ತಾರೆ ಸರ್ಕಾರದ ಆದೇಶಗಳು ನಡವಳಿಕೆಗಳು ವ್ಯವಹಾರಗಳು ಎಲ್ಲವೂ ಕನ್ನಡದಲ್ಲಿ
ಇದ್ದಾಗ ಸರ್ಕಾರಿ ಕಾರ್ಯಕ್ರಮದಲ್ಲೂ ಕೂಡ ಇವರು ಮರಾಠಿಯಲ್ಲಿ ಮಾತನಾಡುವುದು ಸರಿಯಲ್ಲ
ಗಡಿಭಾಗದ ಜನಪ್ರತಿನಿಧಿಗಳು ಕರ್ನಾಟಕದ ಪರವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ
ಮತ್ತು ಅನಾಸಕ್ತಿ ಹೊಂದಿದ್ದಾರೆ ಇದು ಸರಿಯಲ್ಲ ಎಂದವರು ಅಭಿಪ್ರಾಯ ಪಟ್ಟರು.
ಗಡಿ ವಿವಾದದಿಂದಾಗಿ ಯಾವುದೇ ಕಾರಣಕ್ಕೂ ಉಭಯ ರಾಜ್ಯಗಳಲ್ಲಿ ಗಲಭೆಯಾಗಬಾರದು.
ಶ್ರೀಸಾಮಾನ್ಯರಿಗೆ ತೊಂದರೆ ಆಗಬಾರದು. ಆ ದೃಷ್ಟಿಯಿಂದ ಉಭಯ ರಾಜ್ಯಗಳಲ್ಲಿ ಯಾರು ಈ
ಸಂಬAಧ ಬೀದಿಗಿಡಿದು ಹೋರಾಟ ಮಾಡುವುದಾಗಲಿ ಯಾವುದೇ ಕಾರಣಕ್ಕಾಗಲಿ ಪ್ರಚೋದನಾತ್ಮಕ
ಹೇಳಿಕೆಗಳನ್ನು ನೀಡಬಾರದು ಅಲ್ಲಿನ ಭಾಷಾ ಮುಖಂಡರು ಇಲ್ಲಿಗಾಗಲಿ ಇಲ್ಲಿನ ಮುಖಂಡರಾಗಲು
ಅಲ್ಲಿಗೆ ಹೋಗುವುದಾಗಲಿ ಮಾಡಬಾರದು ಎರಡು ಕಡೆ ಸೌಹಾರ್ದತೆ ಶಾಂತಿ ಕಾಪಾಡಿಕೊಳ್ಳಬೇಕು
ಎಂಬ ಕೇಂದ್ರ ಸಚಿವ ಅಮಿತ್ ಷಾ ಅವರ ಸೂತ್ರವನ್ನು ಕರ್ನಾಟಕದವರು ಪಾಲಿಸುತ್ತಾರೆ ಆದರೆ
ಮಹಾರಾಷ್ಟ್ರದವರು ಪಾಲಿಸುವುದಿಲ್ಲ ಅದನ್ನು ಉಲ್ಲಂಘಿಸುತ್ತಿದ್ದಾರೆ ಈಗಲೂ ಬೆಳಗಾವಿಯ
ಮಹಾಮೇಳಾವಕ್ಕೆ ಯಾಕೆ ಬರಬೇಕು ಅದು ಸರಿಯಲ್ಲ ಇದನ್ನು ನಿಯಂತ್ರಿಸುವ ಕೆಲಸವನ್ನು
ಕೇಂದ್ರ ಸರ್ಕಾರ ಮಾಡಬೇಕು ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಗಡಿ ಭಾಗದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳು ಆಗಿವೆ ಮೂಲಭೂತ
ಸೌಲಭ್ಯಗಳು ಇವೆ. ಆದರೆ ಮಹಾರಾಷ್ಟ್ರದಲ್ಲಿ ಮಾತ್ರ ಆ ರೀತಿ ಆಗಿಲ್ಲ ಎಲ್ಲ
ವಿಚಾರಗಳನ್ನು ಸರ್ಕಾರ ಕೇಂದ್ರಕ್ಕೆ ಮುಟ್ಟಿಸಬೇಕು ನಮ್ಮ ಪರವಾದ ಎಲ್ಲ ದಾಖಲೆಗಳನ್ನು
ಸಾಕ್ಷಿಗಳನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸುವ ಕೆಲಸವನ್ನು ಕರ್ನಾಟಕ ಸರ್ಕಾರ
ಮಾಡಬೇಕು ಅದಕ್ಕಾಗಿ ಅತ್ಯುತ್ತಮ ವಕೀಲರನ್ನು ನೇಮಿಸಬೇಕು ನಮ್ಮಲ್ಲಿರುವ ಎಲ್ಲ
ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸುವ ಕೆಲಸವಾಗಬೇಕು. ಕಾವೇರಿಯಿಂದ
ಗೋದಾವರಿವರೆಗೆ ಕರ್ನಾಟಕ ಇತ್ತು ಎನ್ನುವುದನ್ನು ಓದುತ್ತೇವೆ ಎಲ್ಲ ಶಿಲಾ ಶಾಸನಗಳು,
ತಾಡೋಲಿಗಳು ಎಲ್ಲ ದಾಖಲೆಗಳು ಹಳೆಗನ್ನಡದಲ್ಲಿವೆ ಮಹಾರಾಷ್ಟ್ರದಲ್ಲಿರುವ ಪಂಚ ದೈವಗಳು
ಪಂಡರಪುರದ ವಿಠಲ, ಕೊಲ್ಲಾಪುರದ ಲಕ್ಷ್ಮಿ ದೇವಿ, ಜಿಜೂರಿಯ ಖಂಡೋಬಾ, ತುಳ್ಜಾಪುರದ
ತುಳಜಾಭವಾನಿ, ಮತ್ತು ಜ್ಯೋತಿಬಾ ಎಲ್ಲ ದೇವರುಗಳು ಕರ್ನಾಟಕದಿಂದ ಹೋದವರೇ ಆಗಿದ್ದಾರೆ
ಉದಾಹರಣೆಗೆ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನವನ್ನು ಕಟ್ಟಿಸಿದವರು ಕರ್ನಾಟಕದ
Gadi Kannadiga > State > ಗಡಿ ವಿವಾದ : ಜನಪ್ರತಿನಿಧಿಗಳ ನಿರ್ಲಕ್ಷ ಮತ್ತು ಕೇಂದ್ರದ ನಿಲುವಿಗೆ ಚಿಂಚಣಿ ಶ್ರೀಗಳ ಅಕ್ಷೇಪ
ಗಡಿ ವಿವಾದ : ಜನಪ್ರತಿನಿಧಿಗಳ ನಿರ್ಲಕ್ಷ ಮತ್ತು ಕೇಂದ್ರದ ನಿಲುವಿಗೆ ಚಿಂಚಣಿ ಶ್ರೀಗಳ ಅಕ್ಷೇಪ
Murugesh18/12/2022
posted on

More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023