This is the title of the web page
This is the title of the web page

Please assign a menu to the primary menu location under menu

Local News

ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳಿಗೆ ಲೆಕ್ಕಪರಿಶೋಧನೆ ಪೂರೈಸಲು ಆದೇಶ


ಬೆಳಗಾವಿ, ಜ.೨೪ : ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ಕಡ್ಡಾಯವಾಗಿ ಲೆಕ್ಕಪರಿಶೋಧನೆಯನ್ನು ನಿಗದಿತ ಅವಧಿಯೊಳಗೆ ಪೂರೈಸಬೇಕಾಗಿರುತ್ತದೆ.
ಕೆಲವು ಸಂಘಗಳು ಲೆಕ್ಕಪರಿಶೋಧಕರನ್ನು ಆಯ್ಕೆಮಾಡಿಕೊಳ್ಳದಿರುವುದು ಕಂಡು ಬಂದಿರುತ್ತದೆ. ಈ ಪ್ರಯುಕ್ತ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಕರ್ನಾಟಕ ರಾಜ್ಯ, ಬೆಂಗಳೂರು ರವರು ಸಹಕಾರ ಸಂಘಗಳ ಕಾಯ್ದೆ ೬೩(೨) ರಂತೆ ಮತ್ತು ಸೌಹಾರ್ದ ಸಹಕಾರ ಸಂಘಗಳ ಕಾಯ್ದೆ ೩೩(೨) ರಂತೆ ವಂಟನೆ ಆದೇಶ ನೀಡಿರುತ್ತಾರೆ.
ಈ ಪ್ರಯುಕ್ತ ನಿಯುಕ್ತಿಗೊಂಡ ಲೆಕ್ಕಪರಿಶೋಧಕರಿಗೆ ಸಹಕಾರ ನೀಡಿ ಲೆಕ್ಕಪರಿಶೋಧನೆ ಪೂರೈಸಲು ವಿನಂತಿಸಲಾಗಿದೆ. ಲೆಕ್ಕಪರಿಶೋಧನೆ ಬಾಕಿ ಉಳಿದಲ್ಲಿ ಸಹಕಾರ ಕಾಯ್ದೆ ಅನ್ವಯ ಅಗತ್ಯ ಕ್ರಮವಿಟ್ಟು ನೊಂದಣಿ ರದ್ದತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply