ಸವದತ್ತಿ: ಎಸ್ಎಸ್ಎಲ್ಸಿ ನಂತರ ಅನೇಕ ಆಯ್ಕೆಗಳಿವೆ. ಸಮರ್ಪಕ ಮಾರ್ಗದರ್ಶನ ಮತ್ತು ಜ್ಞಾನದ ಕೊರತೆಯಿಂದ ಮಕ್ಕಳು ಗೊಂದಲದಲ್ಲಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳದಿರುವಂತೆ ಪಾಲಕರು ಎಚ್ಚರವಹಿಸಬೇಕು ಎಂದು ಇಸ್ರೋ ವಿಜ್ಞಾ£ ಸಲೀಮ್ ಹವಾಲ್ದಾರ ಹೇಳಿದರು.
ತಾಲೂಕಿನ ಉಗರಗೋಳ ಗ್ರಾಮದ ಬಸವಜ್ಯೋತಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿದ ‘ಎಸ್ಎಸ್ಎಲ್ಸಿ ಆಯ್ತು, ಮುಂದೆ? ಎಂಬ ವಿಷಯದ ಕುರಿತು ಕಾರ್ಯಾಗಾರದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು ತಂತ್ರಜ್ಞಾನ ಯುಗದಲ್ಲಿ ಸಂವಹನ ಕೌಶಲ್ಯ ಅತೀ ಮುಖ್ಯವಾಗಿದೆ. ಇಂಗ್ಲಿಷ್ ಭಾಷೆ ಕಲಿಕೆಯಲ್ಲಿ ಹಿಂಜರಿಕೆ ಬೇಡ. ಪಾಲಕರು ಸಹ ಮಕ್ಕಳ ಕಲಿಕೆಗೆ ಉತ್ತೇಜನ £Ãಡಬೇಕಿದೆ. ಉಜ್ವಲ ಭವಿಷ್ಯಕ್ಕಾಗಿ ಪರಿಣಿತರಿಂದ £ಮ್ಮ ಗುರಿಗೆ ಸರಿ ಹೊಂದುವ ಪದವಿ ಕುರಿತು ಮಾಹಿತಿ ಸಂಗ್ರಹಿಸಿರಿ. ಬೆರಳ ತುದಿಯಲ್ಲಿ ಜಗತ್ತು ತಂದಿಡು ಈ ತಂತ್ರಜ್ಞಾನ ಯುಗದಲ್ಲಿ ಕಠಿಣ ಪರಿಶ್ರಮದ ಜೊತೆಗೆ ಹೊಸ ಆವಿಷ್ಕಾರದ ಮನೋಭಾವ, ಶೃದ್ಧಾಪೂರ್ವಕವಾಗಿ ಶಿಕ್ಷಣ ಪಡೆದರೆ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ಧಾರವಾಡ ಸೃಷ್ಠಿ ಕಾಲೇಜಿನ ಪ್ರಾಂಶುಪಾಲ ರವಿ ಕ್ಯಾಮನ್ನವರ ಮಾತನಾಡಿ, ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸುವ ಇರಾದೆ ಅತೀ ಅವಶ್ಯ. ಈ ಎಸ್.ಎಸ್.ಎಲ್.ಸಿ ಹಂತ ಮುಂದಿನ ಜೀವನದ ದಿಕ್ಸೂಚಿಯಾಗಿದ್ದು, ಉನ್ನತ್ತ ಶಿಕ್ಷಣದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸಗಳ ಆಯ್ಕೆಗಳಿದ್ದು, ಆಸಕ್ತಿಯಿರುವ ವಿಷಯಗಳ ಕಲಿಕೆಗೆ ಹೊಸ ಶಿಕ್ಷಣ £Ãತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಎಲ್ಲ ರಂಗದಲ್ಲಿಯೂ ಪ್ರಾವಿಣ್ಯತೆ ಹೊಂದಲು ವೃತ್ತಿಪರ ಶಿಕ್ಷಣದ ಅಗತ್ಯಕತೆ ಇದೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಹಂಬಲವಿರಬೇಕು. ಸರಕಾರದಿಂದ ಎಲ್ಲ ರೀತಿಯ ಉನ್ನತ್ತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ವಸತಿ ವ್ಯವಸ್ಥೆ ಸೇರಿ ಹಲವು ಸೌಲಭ್ಯಗಳನ್ನು £Ãಡಲಾಗುತ್ತಿದೆ. ವೃತ್ತಿಪರ ಕೋರ್ಸಗಳಿಗಾಗಿ ಬ್ಯಾಂಕಿ£ಂದ ಸಾಲ ಸೌಲಭ್ಯದ ವ್ಯವಸ್ಥೆಯೂ ಇದೆ. ಗ್ರಾಮೀಣ ಭಾಗದ ಕನ್ನಡ ಮಾದ್ಯಮ ವಿದ್ಯಾರ್ಥಿಗಳೇ ಅತೀ ಹೆಚ್ಚು ಅಂಕ ಪಡೆಯುತ್ತಿದ್ದಾರೆ. ಪುಸ್ತಕದೊಟ್ಟಿಗೆ ಒಡನಾಟ, ಅವಕಾಶಗಳ ಸದುಪಯೋಗವಾಗಬೇಕು. ಮಕ್ಕಳಿಗೆ ವೇದಿಕೆ £ರ್ಮಿಸುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರದ್ದಾಗಬೇಕಿದೆಂದರು.
ಸವದತ್ತಿ ಸರಕಾರಿ ಐಟಿಐ ಕಾಲೇಜಿನ ಪ್ರಾಂಸುಪಾಲ ಎಫ್.ಎಮ್. ಹವಾಲ್ದಾರ್ ಮಾತನಾಡಿ, ತಾಂತ್ರಿಕತೆಯ ಬೆಳವಣಿಗೆಯಿಂದ ದೇಶದ ಪ್ರಗತಿ ಸಾಧ್ಯ. ಐಟಿಐ ನಂತರ ಉದ್ಯಮೆ ನಡೆಸಲು ಸರಕಾರದಿಂದ ಬಡ್ಡಿರಹಿತ ಮತ್ತು ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ಸಹ £Ãಡಿದೆ. ಸಾಮಾಜಿಕ ಜಾಲತಾಣಗಳು ನಮ್ಮನ್ನು ಸೋಂಬೆರಿಗಳನ್ನಾಗಿಸುತ್ತಿವೆ. ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಇದ್ದಲ್ಲಿ ಮೊಬೈಲ್ ಬಳಕೆಯಿಂದ ದೂರವಿರಿ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ತಾಯಂದಿರ ದಿನ ಆಚರಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾ£ಸಲಾಯಿತು. ಶೇಷಪ್ಪ ಕೊಪ್ಪದ, ಅಕ್ಷರ ದಾಸೋಹದ ಎಡಿ ಆನಂದ ಭೋವಿ, ಪಿಡಿಒ ಮಹೇಶ ತೆಲಗರ, ಪ್ರಶಾಂತ ತೋಟಗಿ, ಐ.ಸಿ. ಉಮರಾಣಿ, ಮಲ್ಲಪ್ಪ ಪತ್ರಾವಳಿ, ಮಲ್ಲಪ್ಪ ಕೇರಿ ಹಾಗೂ ಪ್ರಮುಖರು ಇದ್ದರು.
Gadi Kannadiga > Local News > ತಂತ್ರಜ್ಞಾನ ಯುಗದಲ್ಲಿ ಸಂವಹನ ಕೌಶಲ್ಯ ಅತೀ ಮುಖ್ಯವಾಗಿz
ತಂತ್ರಜ್ಞಾನ ಯುಗದಲ್ಲಿ ಸಂವಹನ ಕೌಶಲ್ಯ ಅತೀ ಮುಖ್ಯವಾಗಿz
Suresh17/05/2023
posted on
