ಕೊಪ್ಪಳ ಜುಲೈ ೨೭ : ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬಿತ್ತಿದಂತಹ ಮುಂಗಾರಿನ ಬೆಳೆಗಳ ಬೆಳೆವಣಿಗೆ ಕುಂಠಿತಗೊಂಡಿದ್ದು, ಅವುಗಳ ನರ್ವಹಣೆಗಾಗಿ ರೈತರು ಮುಂದಿನ ಕ್ರಮವನ್ನು ಅನುಸರಿಸಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯಿಂದ ಕೆಲವು ಸಲಹೆಗಳನ್ನು ನೀಡಲಾಗಿದೆ.
ಪ್ರಸ್ತುತ ಅತಿವೃಷ್ಟಿಯಲ್ಲಿ ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ರ್ಪಾಡು ಮಾಡಬೇಕು. ಹೊಲದಲ್ಲಿ ಅಲ್ಲಲ್ಲಿ ಬಸಿಗಾಲುವೆಗಳನ್ನು ಮಾಡಿ ಮಣ್ಣಿನಲ್ಲಿ ಇರುವ ಹೆಚ್ಚಾದ ನೀರನ್ನು ಬಸಿದು ಹೋಗುವಂತೆ ನೋಡಿಕೊಳ್ಳಬೇಕು. ಬೆಳೆಗಳ ಚೈತನ್ಯಕ್ಕೆ ಆಯಾ ಬೆಳೆಗಳಿಗೆ ಶಿಫಾರಸ್ಸಿನಂತೆ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು. ಸತತ ಮಳೆಯಿಂದ ಬೆಳೆಗಳಲ್ಲಿ ಕಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಆಯಾ ಬೆಳೆಗಳಿಗೆ ಶಿಫಾರಸ್ಸು ಮಾಡಿರುವ ಕಳೆನಾಶಕಗಳನ್ನು ಸಿಂಪರಣೆ ಮಾಡಿ ಕಳೆಗಳನ್ನು ನರ್ವಹಣೆ ಮಾಡಬೇಕು.
ಸತತ ಮಳೆಯಿಂದ ಶೇಂಗಾ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ಶೇ. ೦.೮ ಕಬ್ಬಿಣದ ಸಲ್ವೇಟ್ ಮತ್ತು ಶೇ. ೦.೫ ರ ಸತುವಿನ ಸಲ್ವೇಟ್ ದ್ರಾವಣವನ್ನು ೧೫ ದಿವಸದ ಅಂತರದಲ್ಲಿ ಎರಡು ಸಲ ಸಿಂಪಡಿಸಬೇಕು. ಪ್ರತಿ ಲೀಟರ್ ನೀರಿಗೆ ೫ ಗ್ರಾಂ ೧೫:೦:೪೫ ಲಘು ಪೋಷಕಾಂಶ ಸಿಂಪರಣೆ ಕೈಗೊಳ್ಳಬೇಕು. ಹೆಚ್ಚಿನ ಮಳೆಯಿಂದ ಗೋವಿನ ಜೋಳದಲ್ಲಿ ಅಲ್ಲಲ್ಲಿ ಕಾಂಡ ಕೊಳೆರೋಗ ಕಂಡು ಬಂದಿದ್ದು ಇದರ ನರ್ವಹಣೆಗಾಗಿ ೩ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು ೦.೫ ಗ್ರಾಂ ಸ್ಪ್ರೆಷ್ಟೋಮೈಸಿನ್ ಸಲ್ಫೇಟ್ ಬೆರೆಸಿದ ದ್ರಾವಣ ಬೇರು ತೊಯ್ಯುವಂತೆ ಮಣ್ಣಿಗೆ ಹಾಕಬೇಕು.
ಗೋವಿನ ಜೋಳದಲ್ಲಿ ಶೇ. ೨೦-೨೫ ರಷ್ಟು ಫಾಲ್ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು, ಕೂಡಲೇ ನರ್ವಹಣೆಗೆ ೦.೨ ಗ್ರಾಂ ಇಮಾಮಕ್ಟಿನ್ ಬೆಂಝೊಯೇಟ್ ಅಥವಾ ೦.೨ ಮಿಲಿ ಸ್ಪೈನೋಸ್ಯಾಡ್ ಅಥವಾ ೦.೪ ಮಿಲಿ ಕ್ಲೋರಾಂಟ್ರಿನಿಲಿಪೋಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವ ಹಾಗೆ ಸಿಂಪಡಿಸಬೇಕು. ಸಿಂಪರಣೆಯನ್ನು ಸಾಯಂಕಾಲದ ಸಮಯದಲ್ಲಿ ಕೈಗೊಳ್ಳುವುದು ಉತ್ತಮ. ಪ್ರತಿ ಲೀಟರ್ ನೀರಿಗೆ ೧೯:೧೯:೧೯ ನೀರಿನಲ್ಲಿ ಕರಗುವ ಗೊಬ್ಬರವನ್ನು ೫ ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು. ರಸ ಹೀರುವ ಕೀಟಗಳ ನರ್ವಹಣೆಗಾಗಿ ೦.೨೫ ಗ್ರಾಂ ಅಸಿಟಾಮಾಪ್ರೀಡ್ ಅಥವಾ ೦.೨೫ ಗ್ರಾಂ ಥೈಯೋಮಿಥೋಗ್ರಾಮ್ ಅಥವಾ ೦.೨ ಮಿಲೀ ಪ್ಲೋನಿಕಮೈನಡ್ ಕೀಟನಾಶಕವನ್ನು ಸಿಂಪಡಿಸಬೇಕು.
ಸರ್ಯಕಾಂತಿ ಬೆಳೆಯುವ ರೈತರು ಆಗಸ್ಟ್ ೧೫ನೇ ತಾರೀಖಿನ ನಂತರ ಬಿತ್ತನೆ ಕೈಗೊಳ್ಳಬಹುದು ಹೊಲದ ಸುತ್ತಲು ಕನಿಷ್ಠ ೪ ರಿಂದ ೫ ಸಾಲು ಎತ್ತರವಾಗಿ ಬೆಳೆಯುವ ಜೋಳ, ಸಜ್ಜೆ, ಗೋವಿನ ಜೋಳವನ್ನು ದಟ್ಟವಾಗಿ ಬಿತ್ತಬೇಕು. ಹೊಲದ ಸುತ್ತಮುತ್ತಲು ಪರ್ಥೆನಿಯಂ ಮತ್ತು ಇತರೆ ಕಳೆಗಳಿಂದ ಮುಕ್ತವಾಗಿರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಸಹಾಯಕ ಕೃಷಿ ನರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ರೈತ ಸಂರ್ಕ ಕೇಂದ್ರಗಳಿಗೆ ಸಂರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಅತಿವೃಷ್ಟಿ: ಜಿಲ್ಲಾಡಳಿತ, ಕೃಷಿ ಇಲಾಖೆಯಿಂದ ರೈತರಿಗೆ ಬೆಳೆಗಳ ನಿರ್ವಹಣೆ ಸಲಹೆ
ಅತಿವೃಷ್ಟಿ: ಜಿಲ್ಲಾಡಳಿತ, ಕೃಷಿ ಇಲಾಖೆಯಿಂದ ರೈತರಿಗೆ ಬೆಳೆಗಳ ನಿರ್ವಹಣೆ ಸಲಹೆ
Suresh27/07/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023