ಬೆಳಗಾವಿ : ಸಮಾಜದಲ್ಲಿ ಮಹಿಳೆಯರು ಕ್ರಿಯಾ ಶೀಲ ಆಗಿರಬೇಕು. ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಪತ್ರಿ ಯೊಬ್ಬರ ಪಾತ್ರ ಬಹಳ ಮುಖ್ಯ ಆಗಿರುತ್ತದೆ ಎಂದು ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ಹೇಳಿದರು.
ನಗರದ ಲಿಂಗಾಯತ ಭವನದಲ್ಲಿ ಭಾನುವಾರ ಲಿಂಗಾಯತ ಮಹಿಳಾ ಸಮಾಜದದಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ಸಂಭ್ರಮ, ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿಮ್ಮ ಅಕ್ಕಪಕ್ಕ ಮಹಿಳಾ ದೌಜನ್ಯ ಆಗುತ್ತಿದ್ದರೆ ತಡೆಯಿರಿ. ದೇಶದಲ್ಲಿ ಎಂದರು. ಎಷ್ಟೋ ಮಹಿಳೆಯರು ಕಷ್ಟಪಟ್ಟು ಮೇಲೆ ಬಂದಿರುತ್ತಾರೆ. ಹೆಣ್ಣು ಮಕ್ಕಳನ್ನು ಬೆಳೆಸುವಾಗ ತಾಯಿ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಮಕ್ಕಳ ಯಶಸ್ಸು ಹಾಗೂ ವೈಫಲ್ಯ ಎರಡರಲ್ಲೂ ಪೋಷಕರು ಅವರನ್ನು ಬೆಂಬಲಿಸಿ. ನೈತಿಕ ಧೈರ್ಯ ಹೇಳಿ, ತಪ್ಪು ತಿದ್ದಿ ಕೊಂಡು ಬೆಳೆಯಲು ಪ್ರೇರೇಪಿಸಬೇಕು ಎಂದರು.
ಮಹಿಳೆಯರಿಗೆ ಖಿನ್ನತೆ ಬರುವುದು ಸಹಜ , ಖಿನ್ನತೆಯನ್ನು ಮಹಿಳೆಯರ ಬಗೆಹರಿಸಿಕೊಳ್ಳಬೇಕು, ಕುಟುಂಬದವರ ಜತೆ, ಸ್ನೇಹಿತರನೊಂದಿಗೆ ಭಾವ ಹಂಚಿಕೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮಹಿಳೆಯರು ಅಪರಾಧ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕು. ಅನಗತ್ಯವಾಗಿ ಆಭರಣಗಳನ್ನು ಧರಿಸಿಕೊಂಡು ಓಡಾಡಬಾರದು.ಸ್ವಯಂರಕ್ಷಣೆಯ ಸಾಧನಗಳನ್ನು ತಮ್ಮ ಬಳಿಯಲ್ಲಿ ಇರಿಸಿಕೊಂಡಿರಬೇಕು.
ಕಾರ್ಯಕ್ರಮದಲ್ಲಿ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ನೈನಾ ಗಿರಿಗೌಡರ, ಕಾರ್ಯದರ್ಶಿ ಕಾವೇರಿ ಕಿಲಾರಿ ಮತ್ತು ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
Gadi Kannadiga > State > ಸಮಾಜದಲ್ಲಿ ಮಹಿಳೆಯರು ಕ್ರೀಯಾ ಶೀಲರಾಗಬೇಕು:ಡಿಸಿಪಿ ಪಿ.ವಿ.ಸ್ನೇಹಾ
ಸಮಾಜದಲ್ಲಿ ಮಹಿಳೆಯರು ಕ್ರೀಯಾ ಶೀಲರಾಗಬೇಕು:ಡಿಸಿಪಿ ಪಿ.ವಿ.ಸ್ನೇಹಾ
Suresh28/08/2023
posted on

More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023
ದನಗಳ ಮಾಲೀಕರ ಗಮನಕ್ಕೆ
22/09/2023
ನೇರ ಸಂದರ್ಶನ.
22/09/2023