This is the title of the web page
This is the title of the web page

Please assign a menu to the primary menu location under menu

Local News

ಕಾಂಗ್ರೆಸ್ ಪಕ್ಷ ಬಡವರ,ಶೋಷಿತರ, ನಿರ್ಗತಿಕರ, ನೊಂದವರ ಧ್ವನಿ: ಡಿ.ಕೆ.ಶಿವಕುಮಾರ


ಚಿಕ್ಕೋಡಿ : ದೇಶದ ಕಟ್ಟುವಲ್ಲಿ ತನ್ನದೇ ಆದ ಮಹತ್ತರ ಪಾತ್ರ ವಹಿಸಿರುವ ನಮ್ಮ ಕಾಂಗ್ರೆಸ್ ಪಕ್ಷ ಬಡವರ,ಶೋಷಿತರ, £ರ್ಗತಿಕರ, ನೊಂದವರ ಧ್ವ£ಯಾಗುವ ಸಲುವಾಗಿ ಕೈಗೊಂಡಿರುವ ಯಾತ್ರೆಯೇ ಈ ಜನಧ್ವ£ ಯಾತ್ರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಅವರು ಬುಧವಾರ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜನಧ್ವ£ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ೨೦೦ ಯು£ಟ್ ಉಚಿತ ವಿದ್ಯುತ್ £Ãಡಲಾಗುವುದು ಎಂದು ಅವರು ಭರವಸೆ £Ãಡಿದರು.
ಇದೊಂದು ಬಿ ರಿಪೋರ್ಟ್ ಸರ್ಕಾರ..!!
ಯಾಕೆಂದರೆ, ಗುತ್ತಿಗೆದಾರ£ಂದ ಲಂಚ ಪಡೆದ ಆರೋಪದಲ್ಲಿ ಮಂತ್ರಿಯೊಬ್ಬ ರಾಜೀನಾಮೆ £Ãಡಿದರೆ ಆತನ ವಿರುದ್ಧ ಕೆಲವು ದಿನಗಳಲ್ಲಿ ಬಿ ರಿಪೋರ್ಟ್ ಸಿದ್ಧವಾಗುತ್ತದೆ. *ಮತ್ತೊಬ್ಬ ಮಂತ್ರಿಯ ಕಚ್ಚೆ ಪುರಾಣ ಸಾಕ್ಷ÷್ಯ ಸಮೇತ ಜಗಜ್ಜಾಹೀರಾಗುತ್ತೆ. ಆತನ ವಿರುದ್ಧ ಕೆಲವೇ ದಿನಗಳಲ್ಲಿ ಬಿ ರಿಪೋರ್ಟ್ ಸಿದ್ಧ.
*ಬಿಜೆಪಿ ಶಾಸಕನ ಹೆಸರು ಬರೆದಿಟ್ಟು ಒಬ್ಬ ಸತ್ತಿದ್ದಾನೆ. ಶಾಸಕನ ವಿರುದ್ಧ ಅಳೆದೂ ತೂಗಿ ಎಫ್ ಐ ಆರ್ ಮಾಡಲಾಗಿದೆ. ಬಹುಶಃ ಇನ್ನು ಕೆಲವೇ ದಿನಗಳಲ್ಲಿ ಬಿ ರಿಪೋರ್ಟ್ ಸಿದ್ದವಾಗುತ್ತೆ!
*ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ಹತ್ತು ಹಲವು ಕಾರ್ಯಕ್ರಮಗಳನ್ನ ಸ್ಥಗಿತಗೊಳಿಸಿದ್ದೇ ಈ ಸರ್ಕಾರದ ಸಾಧನೆ.
*ಕಾಂಗ್ರೆಸ್ ಪಕ್ಷಕ್ಕೆ ೧೩೭ ವರ್ಷಗಳ ಇತಿಹಾಸವಿದೆ. *ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ದೀರ್ಘಕಾಲದವರೆಗೆ ಆಡಳಿತ ಚುಕ್ಕಾಣಿ ಹಿಡಿದು ರಾಷ್ಟ್ರವನ್ನು ಪ್ರಗತಿಯತ್ತ ಕೊಂಡೊಯ್ದ ಏಕೈಕ ಪಕ್ಷ ಕಾಂಗ್ರೆಸ್.
*ಪ್ರಪಂಚದ ಯಾವುದೇ ದೇಶದ ಇತಿಹಾಸದಲ್ಲಿ ಇಂತಹ ಸುದೀರ್ಘ ಇತಿಹಾಸವುಳ್ಳ ಪಕ್ಷ ಮತ್ತೊಂದಿಲ್ಲ!
*ಈ ದೇಶದ ಏಕತೆ, ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟ ಮಹಾತ್ಮ ಗಾಂಧೀಜಿ, ಇಂದಿರಾಜೀ, ರಾಜೀವ್ ಗಾಂಧಿಯವರಂತಹ ಮಹ£Ãಯರು ಕಟ್ಟಿ ಬೆಳೆಸಿದ ಪಕ್ಷ ಸ್ವಾಮಿ ಇದು.
*ಮಾತೆತ್ತಿದರೆ ಕಾಂಗ್ರೆಸ್ ಮುಕ್ತ ಭಾರತ ಅಂತೀರಿ.. ಆದರೆ ಬಿಜೆಪಿಯವರ ಪಾಪದ ಕೊಡ ತುಂಬಿದೆ. ಹಾಗಾಗಿ ಕರ್ನಾಟಕದಿಂದ £ಮ್ಮನ್ನ ಈ ನಾಡಿನ ಜನತೆ ತೊಲಗಿಸೇ ತೊಲಗಿಸ್ತಾರೆ ಅಂತ ಹೇಳ್ತಾ ನಮ್ಮ ಪಕ್ಷವನ್ನ ಮುಂಬರುವ ಚುನಾವಣೆಯಲ್ಲಿ ಆಶೀರ್ವದಿಸಬೇಕು ಎಂದು ಡಿ.ಕೆ.ಶಿವಕುಮಾರ ಕೋರಿದರು.
ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇ?ರಿದಂತೆ ಹಲವಾರು ಮುಖಂಡರು ಇದ್ದರು.


Gadi Kannadiga

Leave a Reply