WhatsApp Group
Join Now
ಬೆಳಗಾವಿ; ರೂಪಾ ಚನಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆ ದೇವಲಾಪುರ ತಾಲೂಕು ಬೈಲಹೊಂಗಲ ಇವರು S S L C ಯಲ್ಲಿ 625/625ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುತ್ತಾಳೆ ಇವರಿಗೆ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿಯವರು ಸಾಧಕಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿತ್ತು, ವಚನ ಪ್ರಾರ್ಥನೆ ಮಾಡಿ ಮಹಿಳೆಯರು ವಚನ ಗಾಯನ ನಂತರ ಸಾಧಕಿ ರೂಪಾ ಚನಗೌಡ ಪಾಟೀಲ ಅವರಿಗೆ ಶಾಲು ಗ್ರಂಥ ಪುಷ್ಪ ಹಾಗೂ ಧನ ಸಹಾಯ ಮಾಡಿ ಗೌರವ ಸಲ್ಲಿಸಲಾಯಿತು, ಅವರ ಜೋತೆಯಲ್ಲಿ ಅವರ ದೊಡ್ಡಪ್ಪಾ ಗಂಗನಗೌಡ ಪಾಟೀಲರನ್ನು ಗೌರವಿಸಲಾಯಿತು. ಪ್ರೊ, ಶ್ರೀಕಾಂತ್ ಶಾನವಾಡವರು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘವು ಇಂತಹ ಮಕ್ಕಳನ್ನು ಗುರುತಿಸಿ ಸನ್ಮಾನಿಸುವುದರ ಮುಖಾಂತರ ಮಕ್ಕಳಿಗೆ ಪ್ರೂತ್ಸಾಹ ಮತ್ತು ಧನಸಹಾಯವನ್ನು ಮಾಡುತ್ತಾ ಬಂದಿದೆ. ಇದರ ಸದುಪಯೋಗ ಪಡೆದುಕೊಂಡು ಮುಂದೆ ಚೆನ್ನಾಗಿ ಓದಿ ಆ ಮಕ್ಕಳು ಮುಂದೆ ಉನ್ನತ ಹುದ್ದೆಯನ್ನು ಪಡೆದು ಸಮಾಜಕ್ಕೆ ನಾಡಿಗೆ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಈ ರೀತಿಯಾದ ಸಾಧನೆ ಮೊತ್ತೊಬ್ಬರಿಗೂ ಮಾದರಿಯಾಗಬೇಕು ಇದರಿಂದ ಇನ್ನಿತರ ಮಕ್ಕಳಲ್ಲಿ ಸಾಧನೆ ಭಾವನೆಗಳು ಹುಟ್ಟಿ ಉತ್ತಮ ಸಾಮಾಜ ನಿರ್ಮಿಸಲು ಸಾಧ್ಯ ಎಂದರು. ಶಿಕ್ಷಕಿ ದಾನಮ್ಮ ಝಳಕಿ ಮೇಡಂ ಮಾತನಾಡುತ್ತಾ ಬಹಳಷ್ಟು ಜನರಿಗೆ ಸರಕಾರಿ ಶಾಲೆಗಳೆಂದರೆ ತಿರಸ್ಕಾರ ಭಾವನೆ ಇದೆ ಆದರೆ ಈ ಮಗು ಸರಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿರುವುದು ಶಿಕ್ಷಕರೆಲ್ಲರಿಗೂ ಹೆಮ್ಮೆಯ ವಿಷಯ ಸರಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಕರಿದ್ದು ಉತ್ತಮ ಶಿಕ್ಷಣ ದೊರುಕುತ್ತದೆ ಅದನ್ನು ಅರ್ಥಮಾಡಿಕೊಳ್ಳಬೇಕು ಗ್ರಾಮೀಣ ಪ್ರದೇಶದ ಮಕ್ಕಳು ಇವತ್ತು ಸರಕಾರಿ ಶಾಲೆಯಿಂದಲೇ ಸಾಧನೆಯನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು ಅಧ್ಯಕ್ಷರು ಎಸ್ ಜಿ ಸಿದ್ನಾಳರು ಮಾತನಾಡಿ ಸಾಧಕಿ ರೂಪಾಳಿಗೆ ಅಭಿನಂದಿಸುತ್ತಾ ಹೀಗೆ ಮುಂದೆಯ ಸಾಧನೆ ಮಾಡುತ್ತಾ ಬಸವಾದಿ ಶರಣರ ಆಶಿರ್ವಾದ ಅವಳ ಮೇಲೆ ಸದಾ ಇರಲಿ ಸಮಾಜಕ್ಕೆ ಅವಳಿಂದ ಉತ್ತಮೋತ್ತಮವಾದ ಕಾರ್ಯಗಳ ಆಗಲಿ ಎಂದು ಶುಭ ಹಾರೈಸಿದರು ಸಂಘದ ಎಲ್ಲ ಶರಣೆ ಶರಣೆಯರು ಇದ್ದು ಆ ಬಾಲಕಿಗೆ ಶುಭ ಹಾರೈಸಿ ಆಶಿರ್ವದಿಸಿದರು.