ಬೆಳಗಾವಿ, ಮಾ.೩೦: ಜಾನಪದ ಸಂಸ್ಕೃತಿಯೂ ಭಾರತದ ಮೂಲ ಸಂಸ್ಕೃತಿಯಾಗಿದೆ ಇದನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಸಂಘ-ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ ಆದ್ದರಿಂದ ಮೇಲಿಂದ ಮೇಲೆ ಇಂತಹ ಜಾನಪದ ಕಾರ್ಯಕ್ರಮಗಳು ನೇರವೇರಬೇಕಿದೆ ಎಂದು ವಕೀಲರಾದ ಮಹಾಂತೇಶ ಟಿ. ಪಾಟೀಲ ಅವರು ತಿಳಿಸಿದರು.
ಜಾನಪದ ಸಾಂಸ್ಕೃತಿಕ ಕಲಾ ಉತ್ಸವವು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಹಾಗೂ ಶ್ರೀ ಸಿದ್ಧಾರೂಢ ಮಹಿಳಾ ಕಲಾ ಸಂಘ, ಜೋಕಾನಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ.೨೬ ೨೦೨೩ ರಂದು ಮೂಡಲಗಿ ತಾಲೂಕಿನ ಫುಲಗಡ್ಡಿ ಗ್ರಾಮದಲ್ಲಿ ನಡೆಯಿತು.
ಬೆಳಿಗ್ಗೆ ೧೧ ಗಂಟೆಗೆ ಮೆರವಣಿಗೆ ಕಾರ್ಯಕ್ರಮ, ನಂತರ ವೇದಿಕೆ ಕಾರ್ಯಕ್ರಮ ಜರುಗಿತು. ಶ್ರೀ ಅಭಿನವ ಸಂಗಮನಾಥ ಸ್ವಾಮಿ, ಶ್ರೀ ಚಿದಾನಂದ ಸ್ವಾಮಿಜಿ, ಗುರು ವೀರಭದ್ರಸ್ವಾಮಿಗಳು ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಉಪನ್ಯಾಸಕ ಮತ್ತು ಸಾಹಿತ್ಯ ಚಿಂತಕರಾದ ಪ್ರಕಾಶ ಕೋಟಿನತೋಟ ಅವರು ಸಾವಯವ ಕೃಷಿ ಬಗ್ಗೆ ಮಾತನಾಡಿ ಜಾನಪದ ಕೃಷಿ ಬಗ್ಗೆ ತಿಳಿಸಿದರು. ಮೊದಲಿನ ಸಾವಯವ ಕೃಷಿ ಪದ್ಧತಿಯನ್ನು ಬಳಸಿ ಸಾವಯವ ಬೆಳೆಗಳನ್ನು ಬೆಳೆಯಬೇಕು ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ ಸಾಹಿತ್ಯ ಚಿಂತಕರಾದ ಡಾ. ಅರುಣ ಸವತಿಕಾಯಿ ಅವರು ಮಾತನಾಡಿ ಭಾರತದಲ್ಲಿ ಜಾನಪದ ಕಲಾ ಸಂಸ್ಕೃತಿಯು ಅತೀ ಪುರಾತನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕಣ್ಮರೆಯಾಗುತ್ತಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ನಾವೆಲ್ಲರೂ ಕೂಡಿಕೊಂಡು ಯಶಸ್ವಿಯಾಗಿ ನೇರವೇರಿಸಬೇಕು ಎಂದು ಹೇಳಿದರು.
ಇತ್ತಿಚೀನ ದಿನಗಳಲ್ಲಿ ಮೊಬೈಲ, ಕಂಪ್ಯೂಟರ, ಹಾಗೂ ಟಿವಿ ಬಳಕೆಯಿಂದ ಹಲವಾರು ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ ಆದ್ದರಿಂದ ನಾವು ಇವುಗಳ ಬಳಕೆಯನ್ನು ಕಡಿಮೆ ಮಾಡಿ ಜಾನಪದ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಸಾಹಿತಿಗಳಾದ ವಿದ್ಯಾ ರೆಡ್ಡಿ ಅವರು ತಿಳಿಸಿದರು.
ಈಶ್ವರಚಂದ್ರ ಎಸ್. ಬೇಟಗೇರಿ, ಡಾ. ಲಕ್ಷö್ಮಣ ಚೌರಿ, ಸುನಂದಾ ಪೂಜೇರಿ, ಪ್ರದೀಪ ಇಂಡಿ, ಬಸವರಾಜ ಕಡಖಭಾವಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತಿ ಜೋಕಾನಟ್ಟಿ ನಿರೂಪಿಸಿದರು. ಸರಸ್ವತಿ ಮಾದರ ವಂದಿಸಿದರು. ಹಾಗೂ ಜಾನಪದ ಕಲಾವಿದೆಯಾದ ಸುಂದರವ್ವಾ ಮಾದರ ಇವರನ್ನು ಸನ್ಮಾನಿಸಲಾಯಿತು.
ಜಾನಪದ ನೃತ್ಯ, ಜಾನಪದ ಸಂಗೀತ, ಜಗ್ಗಲಗಿ ಕುಣಿ, ಲಂಬಾಣಿ ಭಜನೆ, ಭಜನಾ ಪದಗಳು, ಗೀಗೀ ಪದಗಳು, ಸಂಪ್ರದಾಯ ಪದಗಳು, ಕೋಲಾಟ, ಜಾನಪದ ಸಂಗೀತ, ಸೋಬಾನ ಪದ, ಬಿಸುವಕಲ್ಲಿನ ಪದ, ಡೊಳ್ಳಿನ ಪದ, ಶಾವರಕಿ ಪದ, ಸಣ್ಣಾಟ ಪದ, ಹಲಗೆ ಮೇಲ, ಸಂಗ್ಯಾ ಬಾಳ್ಯಾ ಸಣ್ಣಾಟ, ಕರಡಿ ಮಜಲು, ಕೋಲಾಟ, ದಟ್ಟಿ ಕುಣಿತ, ತಾಸೇವಾದನ, ದೊಡ್ಡಾಟ ಪದಗಳು ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡವು .
Gadi Kannadiga > Local News > ಜಾನಪದ ಕಲೆ ಭಾರತದ ಮೂಲ ಸಂಸ್ಕೃತಿ: ಮಹಾಂತೇಶ ಪಾಟೀಲ
ಜಾನಪದ ಕಲೆ ಭಾರತದ ಮೂಲ ಸಂಸ್ಕೃತಿ: ಮಹಾಂತೇಶ ಪಾಟೀಲ
Suresh30/03/2023
posted on

More important news
ವ್ಯಕ್ತಿ ನಾಪತ್ತೆ
08/06/2023
ಯುವತಿ ನಾಪತ್ತೆ
08/06/2023