WhatsApp Group
Join Now
ಗಂಗಾವತಿ :: ಹೊಸಪೇಟೆಯಲ್ಲಿ ಜೆ.ಬಿ. ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ “ಹಂಪಿ ಓಪನ್ 1ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಷಿಪ್”ನಲ್ಲಿ ಗಂಗಾವತಿಯ ಸಕ್ಸಸ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಶನ್ನ ನಾಲ್ವರು ಕರಾಟೆ ಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಪದಕಗಳನ್ನು ಜಯಿಸಿದ್ದಾರೆ.
ಸೀನಿಯರ್ ವಿಭಾಗದ -45 ಕೆ.ಜಿ ತೂಕದ ಸ್ಪರ್ಧೆಯಲ್ಲಿ ದಾನಮ್ಮ ಪ್ರಥಮ ಸ್ಥಾನ, ಜೂನಿಯರ್ ವಿಭಾಗದ -30 ಕೆ.ಜಿಯಲ್ಲಿ ನಾಗರಾಜ್ ಪ್ರಥಮ, ಸಬ್ ಜೂನಿಯರ್ ವಿಭಾಗದ -40 ಕೆ.ಜಿಯಲ್ಲಿ ಚನ್ನಬಸವ ದ್ವಿತೀಯ, ಹಾಗೂ ಜೂನಿಯರ್ ವಿಭಾಗದ -60 ಕೆ.ಜಿಯಲ್ಲಿ ಹರ್ಷ ತೃತೀಯ ಸ್ಥಾನ ಗಳಿಸಿದ್ದಾರೆ.
ಅಸೋಸಿಯೇಶನ್ನ ಮುಖ್ಯ ತರಬೇತುದಾರ ಬಾಬುಸಾಬ್ ಮಾತನಾಡಿ, “ಸತತ ಪರಿಶ್ರಮ ಮತ್ತು ನಿಷ್ಠೆಯ ಅಭ್ಯಾಸವೇ ಯಶಸ್ಸಿನ ಕೀಲಿಕೈ. ನಮ್ಮ ವಿದ್ಯಾರ್ಥಿಗಳು ಪ್ರತಿದಿನವೂ ಕಠಿಣ ಪರಿಶ್ರಮದಿಂದ ತರಬೇತಿ ಪಡೆದು ಇಂತಹ ಮಟ್ಟದ ಸ್ಪರ್ಧೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದು ಹೆಮ್ಮೆಪಡುವ ಸಂಗತಿ,” ಎಂದು ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭ ಅಖಿಲ ಕರ್ನಾಟಕ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಶನ್ನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ, ಮುಖ್ಯ ತೀರ್ಪುಗಾರ ಕಲ್ಯಾಣಕುಮಾರ್, ರಜಾಕ್ ಹಾಗೂ ಸಹ ತರಬೇತುದಾರ ಅಜಯಕುಮಾರ್ ಉಪಸ್ಥಿತರಿದ್ದರು.