ಮುದಗಲ್ :-ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಅಂಕಲಿಮಠದ ಸದ್ಗುರು ನಿರುಪಾಧೀಶ್ವರ ಜಾತ್ರಾ ಮಹೋತ್ಸವದ ದಿವ್ಯ ಸಾನಿದ್ಯವನ್ನು ಶ್ರೀ ಪರಮ ಪೂಜ್ಯ ವೀರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ ರವರ ವಹಿಸಿಕೊಂಡಿದ್ದರು. ಹಾಗೂ ನಾಡಿನ ಹರ ಗುರು ಚರ ಮೂರ್ತಿಗಳು ನೇತೃತ್ವದಲ್ಲಿ ಹಾಗೂ ಮುಖ್ಯ ಅತಿಥಿಗಳಾದ ಸಂಜೀವ ಕುಮಾರ್ ಹಂಚಾಟಿ ಮುಖ್ಯ ನ್ಯಾಯಮೂರ್ತಿಗಳು ಕರ್ನಾಟಕ ಉಚ್ಚನ್ಯಾಯಾಲಯ ಬೆಂಗಳೂರು ಹಾಗೂ ಎನ್ ಎಸ್ ಪಾಟೀಲ್ ನ್ಯಾಯಾಧೀಶರು ಕರ್ನಾಟಕ ಭೂ ಕಬಳಿಕೆ ನಿಷೇಧದ ವಿಶೇಷ ನ್ಯಾಯಾಲಯ ಬೆಂಗಳೂರು ರವರು ಹಾಗೂ ನಾಡಿನ ಸಕಲ ಸದ್ಭಕ್ತರು ಭಾಗವಹಿಸಿ ನಿರೂಪಾಧೀಶ್ವರ ರ ಆಶೀರ್ವಾದ ಪಡೆದು ಪ್ರಸಾದ ಸೇವಿಸಿದರು.ಇದೆ ಸಂಧರ್ಭ ದಲ್ಲಿ ವಿವಿಧ ರಂಗದಲ್ಲಿ ಸೇವೆ ಹಾಗೂ ಸಾಧನೆ ಗೈದ ಮಹನೀಯರಿಗೆ ನಿರೂಪಾಧೀಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ರಕ್ತದಾನ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಾಮೂಹಿಕ ವಿವಾಹ.,ಸಂಗೀತ ಕಾರ್ಯಕ್ರಮ, ಸಾಯಂಕಾಲ ನಿರುಪಾಧೀಶ್ವರ ರಥೋತ್ಸವ ಜರುಗಿತು.