ಸವದತ್ತಿ : ಇಲ್ಲಿನ ಸವಳಹಭಾವಿ ಓಣಿಯ ಸ.ಹಿ.ಪ್ರಾ ಕನ್ನಡ ಶಾಲೆ ನಂ-೨ ರಲ್ಲಿ೧೯೯೦-೯೧ ರಿಂದ ೧೯೯೬-೯೭ ನೇ ಸಾಲಿನಲ್ಲಿ ಕಲಿತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸ್ನೇಹ-ಕೂಟದಿಂದ ಗುರುವಂದನೆ ಹಾಗೂ ಗೆಳೆಯರ ಮಿಲನ,ವಿದ್ಯೆ ಕಲಿಸಿದ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾರ್ಥಿ ಪ್ರತಿ£ಧಿ ಕಿರಣ ರಜಪೂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.೧೦ರಂದು ರವಿವಾರ ಪಟ್ಟಣದ ಸವಳಭಾವಿ ಓಣಿಯ ಸಮೂದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, £ವೃತ್ತ ಶಿಕ್ಷಕರಾದ ಜಿ.ಸಿ.ಕುರಡೂರ ಗುರುವಂದನೆಯ ಮುಖ್ಯ ಸನ್ಮಾ£ತರಾಗಿ ಆಗಮಿಸಲಿದ್ದು, ಇವರ ಜೊತೆಗೆ £ವೃತ್ತ ಶಿಕ್ಷಕರಾದ ಎಸ್.ಎನ್ ಬೆಳವಡಿ, ಜಿ.ಎಮ್ ಪುರಾಣಿಕಮಠ, ಹಾಗೂ ಜಿ.ಎಸ್ ಸುಣಗಾರ ಇವರನ್ನೂ ಸಹ ಸನ್ಮಾ£ಸಲಾಗುವುದು.
ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಸದಸ್ಯರಾದ ಶಿವಾನಂದ ಹೂಗಾರ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಈರಪ್ಪ ಮುಳ್ಳೂರ ಅದ್ಯಕ್ಷತೆ ವಹಿಸಲಿದ್ದಾರೆ. ಪುರಸಭೆಯ ಸದಸ್ಯರಾದ ಧರೆಪ್ಪ ಮಡ್ಲಿ, ಹಿರಿಯರಾದ ಸೋಮಪ್ಪ ಸೋಗಲದ ಮತ್ತು ಮುಖ್ಯ ಶಿಕ್ಷಕಿಯಾದ ಆರ್.ಎಚ್ ನಾಗನೂರ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಸ್ನೇಹ ಕೂಟದ ವಿದ್ಯಾರ್ಥಿಗಳಿಂದ ಸೆ.೧೦ರಂದು ಗುರುವಂದನಾ ಕಾರ್ಯಕ್ರಮ :
ಸ್ನೇಹ ಕೂಟದ ವಿದ್ಯಾರ್ಥಿಗಳಿಂದ ಸೆ.೧೦ರಂದು ಗುರುವಂದನಾ ಕಾರ್ಯಕ್ರಮ :
Suresh08/09/2023
posted on
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023