ಬೆಳಗಾವಿ : ಬೆಳಗಾವಿಯ ಪತ್ರಕರ್ತರ ಕಾಲೋನಿಯ ಲಂಬಾಣಿ ಭವನದ ಬಳಿ ಹೆಸ್ಕಾಂ ಇದೀಗ ಅವೈಜ್ಞಾನಿಕವಾಗಿ ವಿದ್ಯುತ್ ಕಂಬ ಅಳವಡಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗಟಾರ್ ಬಿಟ್ಟು ಎರಡು ಅಡಿ ದೂರದಲ್ಲಿ ವಿದ್ಯುತ್ ಕಂಬ ಅಳವಡಿಸಬೇಕು. ಆದರೆ ಇಲ್ಲಿ ಅಂತಹ ನಿಯಮವನ್ನು ಪಾಲಿಸಿಲ್ಲ. ಇಲ್ಲಿ ಎರಡು ಅಡಿ ಬದಲಿಗೆ ಎಂಟರಿಂದ ಹತ್ತು ಅಡಿ ದೂರದಲ್ಲಿ ಕರೆಂಟ್ ಕಂಬ ಅಳವಡಿಸಿರುವುದು ಯಾಕೆ ಎಂಬ ಪ್ರಶ್ನೆ ನಾಗರಿಕರದ್ದಾಗಿದೆ. ಇದರಲ್ಲಿ ಯಾರ ಹಿತಾಸಕ್ತಿ ಇದೆ ಎನ್ನುವುದು ಗೊತ್ತಾಗುತ್ತಿಲ್ಲ. ಹೆಸ್ಕಾಂ ಈ ನಿಟ್ಟಿನಲ್ಲಿ ಎಚ್ಚೆತ್ತು ಈಗಲೇ ಆಗಿರುವ ಎಡವಟ್ಟನ್ನು ಸರಿಪಡಿಸಬೇಕು. ವಿದ್ಯುತ್ ಕಂಬಕ್ಕೆ ತಂತಿ ಅಳವಡಿಸುವ ಮೊದಲೇ ಆಗಿರುವ ತಪ್ಪನ್ನು ಗಮನಿಸಬೇಕು. ಇಲ್ಲದಿದ್ದರೆ ಮುಂದೆ ತೊಂದರೆ ಆಗಲಿದೆ ಎನ್ನುವುದು ನಾಗರಿಕರ ಎಚ್ಚರಿಕೆಯಾಗಿದೆ.