WhatsApp Group
Join Now
ಕುಷ್ಟಗಿ:- ಅನೇಕ ದಶಕಗಳಿಂದ ಕನಸಾದ ನಮ್ಮ ತಾಲೂಕಿನ ರೈಲು ನಿಲ್ದಾಣ ಕಾಮಗಾರಿ ಸಂಪೂರ್ಣಗೊಂಡಿದ್ದು ಈಗ ಇದೇ ತಿಂಗಳು ಮೆ.15 ರಂದು ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣ ಇವರು ಅಧಿಕೃತವಾಗಿ ರೈಲ್ವೆ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.
ಇಲ್ಲಿನ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವಾರು ದಿನಗಳಿಂದ ನಮ್ಮ ತಾಲೂಕಿನ ಗದಗ ವಾಡಿ ರೈಲ್ವೆ ಆಗಬೇಕು ಎಂದು ಸುಮಾರು ದಿನಗಳಿಂದ ಹೋರಾಟವನ್ನು ಮಾಡಲಾಗಿತ್ತು ಹೋರಾಟದ ಫಲವಾಗಿ ಕೇಂದ್ರ ಸರಕಾರದ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಗದಗ ವಾಡಿ ರೈಲ್ವೆ ಯೋಜನೆ ಮೂಲಕ ಇವತ್ತು ಮೊದಲನೆ ಹಂತದಲ್ಲಿ ಹುಬ್ಬಳ್ಳಿಯಿಂದ ವಾಯಾ ಗದಗ, ತಳಕಲ್, ಕುಕನೂರು, ಯಲಬುರ್ಗಾ ಕುಷ್ಟಗಿಯ ವರಗೆ ರೈಲ್ವೆ ಕಾಮಗಾರಿ ಮುಗಿದ ಹಿನ್ನೆಲೆ ರೈಲ್ವೆ ನಿಲ್ದಾಣವನ್ನು ಉದ್ಘಾಟನೆ ಆಗಲಿದೆ ಆದ್ದರಿಂದ ತಾಲೂಕಿನ ಎಲ್ಲಾ ಜನತೆ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು ಮತ್ತು ರೈಲ್ವೆ ಸಚಿವರು ಮೆ. 14 ದಹಲಿಯಿಂದ ರಂದು ಹುಬ್ಬಳ್ಳಿ ಬರುತ್ತಾರೆ ಹುಬ್ಬಳ್ಳಿಯಿಂದ ನೇರವಾಗಿ ಹೊಸಪೇಟೆಗೆ ರಾತ್ರಿ ವಾಸ್ತವ್ಯ ಊಡಲಿದ್ದು ನಂತರ 15ನೇ ತಾರೀಕಿಗೆ ಬೆಳಗ್ಗೆ 8:30ಕ್ಕೆ ಹೊಸಪೇಟೆ ಬಿಟ್ಟು 9:45 ಕ್ಕೆ ಕುಷ್ಟಗಿಗೆ ತಲುಪಲಿದ್ದಾರೆ ಅಂದು ಮಾನ್ಯ ರೈಲ್ವೆ ಸಚಿವರನ್ನು ಸ್ವಾಗತ ಮಾಡುಕೊಳ್ಳುವ ಮೂಲಕ ಬೈಕ್ ರಾಲಿ ಮಾಡುವ ಮೂಲಕ ಮಾನ್ಯ ಸಚಿವರನ್ನು ರೈಲ್ವೆ ನಿಲ್ದಾಣದವರೆಗೆ ಕರೆತರಲಾಗುವುದು ತದನಂತರ ವೇದಿಕೆ ಕಾರ್ಯಕ್ರಮ ರೈಲ್ವೆ ಉದ್ಘಾಟನೆ ಕಾರ್ಯಕ್ರಮ ನೆರವೇರಿಲಿದೆ ಈ ಒಂದು ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳಾದ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಸಂಸದ ಪಿ.ಸಿ.ಗದ್ದಿಗೌಡರ್ ಸೇರಿದಂತೆ ಸ್ಥಳೀಯ ಎಲ್ಲಾ ಜನ ಪ್ರತಿನಿಧಿಗಳು ಕುಷ್ಟಗಿ ಪಟ್ಟಣದ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಅಂದಿನಿಂದ ಪ್ರತಿ ನಿತ್ಯ ಹುಬ್ಬಳ್ಳಿಯಿಂದ ಕುಷ್ಟಗಿಯ ವರಗೆ ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ ರೈಲ್ವೆ ಸಂಚಾರ ಮಾಡಲಿದೆ ಕುಷ್ಟಗಿಯಿಂದ ಬಳ್ಳಿಯವರಿಗೆ ರೈಲ್ವೆಯಲ್ಲಿ ಸಾರ್ವಜನಿಕರು ಪ್ರಾಣಿಸಬಹುದಾಗಿದೆ ಆದ್ದರಿಂದ ಪಟ್ಟಣದ ಜನತೆ ಮತ್ತು ತಾಲೂಕಿನ ಎಲ್ಲಾ ಜನತೆ ಪಕ್ಷಾತೀತವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸವರಾಜ ಕ್ಯಾವಟರ್, ಪುರಸಭೆ ಮಾಜಿ ಆಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಕಲ್ಲೇಶ ತಾಳದ್, ಜಿ.ಕೆ.ಹಿರೇಮಠ, ಅಶೋಕ ಬಳೂಟಗಿ, ಶಶಿದರ ಕವಲಿ, ಉಮೇಶ ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.