ಕಡವೆ ಬೇಟೆಯಾಡುತ್ತಿದ್ದ ಒಂಭತ್ತು ಜನರನ್ನ ಬಂಧಿಸಿದ ಖಾನಾಪುರ ಅರಣ್ಯ ಇಲಾಖೆ ಸಿಬ್ಬಂದಿ

Prasanna Kumbar
WhatsApp Group Join Now

ಗಡಿ ಕನ್ನಡಿಗ

 

ಖಾನಾಪುರ:ದಿನಾಂಕ 26 ಶುಕ್ರವಾರದಂದು ಸಾಯಂಕಾಲ 5 ಗಂಟೆ ಸುಮಾರಿಗೆ ಲೋಂಡಾ ವಲಯದ ನೇರಸೆಯಲ್ಲಿ ಕಡವೆಯನ್ನು ಬೇಟೆಯಾಡಿದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಖಾನಾಪುರ ಅರಣ್ಯ ಇಲಾಖೆ ಸಿಬ್ಬಂದಿ ಒಂಭತ್ತು ಜನರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ಬೆಳಗಾವಿ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ನೇರಸೆ ಅರಣ್ಯ ಸರ್ವೆ ನಂಬರ್ 102 ರ ಪಕ್ಕದಲ್ಲಿರುವ ಮಾಲ್ಕಿ ಸರ್ವೆ ನಂಬರ್ 104/2 ರಲ್ಲಿ ಕಡವೆಯನ್ನ‌ ಬೇಟೆಯಾಡಿದ ನೇರಸೆ ಗ್ರಾಮದ ರಂಜಿತ್ ಜೈಸಿಂಗ್ ದೇಸಾಯ,ಬಲವಂತ ನಾರಾಯಣ ದೇಸಾಯಿ, ಆತ್ಮಾರಾಮ ಯಲ್ಲಪ್ಪ ದೇವಳಿ, ಪ್ರಮೋದ ನಾಮದೇವ ದೇಸಾಯಿ, ದತ್ತರಾಜ ವಿಲಾಸ ಹವಾಲದಾರ,ಜ್ಞಾನೇಶ ಮಂಗೇಶ ಗಾವಡೆ, ಗೋವಿಂದ ರಾಮಚಂದ್ರ ದೇಸಾಯಿ,ಅಪ್ಪಿ ಇಂಗಪ್ಪಾ ಹಣಬರ, ಬರಾಪ್ಪಾ ಬಾಬು ಹಣಬರ ಎಂಬ‎ ಒಟ್ಟು 9 ಜನ ಆರೋಪಿಗಳನ್ನ ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39, 44, 50, 51 ರ ಅಡಿಯಲ್ಲಿ ಲೋಂಡಾ ವಲಯ ಅಪರಾಧ ಸಂಖ್ಯೆ: 07/2025-26 ರಂತೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಖಾನಾಪೂರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ, ವಲಯ ಅರಣ್ಯ ಅಧಿಕಾರಿ, ಖಾನಾಪೂರ ಶ್ರೀಕಾಂತ ಪಾಟೀಲ, ವಲಯ ಅರಣ್ಯ ಅಧಿಕಾರಿ, ಭೀಮಗಡ ಸಯ್ಯದದಸಾಬ ನಧಾಪ, ಲೋಂಡಾ ಉಪ ವಲಯ ಅರಣ್ಯಾಧಿಕಾರಿ, ವೈ.ಎಸ್ ಪಾಟೀಲ ಹಾಗೂ ಖಾನಾಪೂರ ಮತ್ತು ಭೀಮಗಡ ವಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article
error: Content is protected !!