ಬೆಳಗಾವಿ೧: ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಚುಸಾಪ ರಾಜ್ಯ ಸಂಚಾಲಕರಾದ ಡಾ. ಎಂ. ಜಿ. ಆರ್. ಅರಸ್ ಅವರಿಂದಿಲ್ಲಿ ಘೋಷಿಸಿದರು.
ಕಳೆದ ನಾಲ್ಕು ವರ್ಷ ಚುಸಾಪ ಅಧ್ಯಕ್ಷರಾಗಿದ್ದ ಅಶೋಕ ಮಳಗಲಿ ಅವರ ಸ್ಥಾನದಲ್ಲಿ ಶಾಸ್ತ್ರಿಯವರ ನೇಮಕವಾಗಿದ್ದು , ಶಾಸ್ತ್ರಿಯವರು ೧೯೮೭ ರಲ್ಲಿ ಜಿಲ್ಲಾ ಘಟಕ ಸ್ಥಾಪಿಸಿ ೨೧ ವರ್ಷಗಳ ಕಾಲ ಮುನ್ನಡೆಸಿ ಎರಡು ರಾಜ್ಯ ಸಮ್ಮೇಳನ, ಎರಡು ಜಿಲ್ಲಾ ಸಮ್ಮೇಳನಗಳ ಸಹಿತ ನೂರಾರು ಕಾರ್ಯಕ್ರಮ ನಡೆಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸ್ತ್ರಿಯವರು ಪ್ರಸ್ತುತ ವರ್ಷ ನವೆಂಬರದಲ್ಲಿ ಚುಸಾಪ ಬೆಳ್ಳಿ ಹಬ್ಬ ಆಚರಿಸಲಿರುವದಾಗಿ ಪ್ರಕಟಿಸಿದರು.
Gadi Kannadiga > Local News > ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಲ್. ಎಸ್. ಶಾಸ್ತ್ರಿ ನೇಮಕ
ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಲ್. ಎಸ್. ಶಾಸ್ತ್ರಿ ನೇಮಕ
Suresh02/05/2023
posted on

More important news
ವ್ಯಕ್ತಿ ನಾಪತ್ತೆ
08/06/2023
ಯುವತಿ ನಾಪತ್ತೆ
08/06/2023