This is the title of the web page
This is the title of the web page

Please assign a menu to the primary menu location under menu

State

ಮುನಿರಾಬಾದ್: ಸೆ. ೧೩ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ


ಕೊಪ್ಪಳ ಸೆಪ್ಟೆಂಬರ್ ೧೨ : ಮುನಿರಾಬಾದ್‌ನ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಯ ೩೩ ಕೆ.ವಿ ಕಂಪಸಾಗರದಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವ ಪ್ರಯುಕ್ತ, ವಿವಿಧ ಗ್ರಾಮಗಳಲ್ಲಿ ಸೆಪ್ಟೆಂಬರ್ ೧೩ರಂದು ಬೆಳಿಗ್ಗೆ ೧೦.೩೦ ರಿಂದ ಸಾಯಂಕಾಲ ೫.೩೦ ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಕಂಪಸಾಗರ, ಹುಲಿಗಿ, ಹಿಟ್ನಾಳ, ಹಳೆಲಿಂಗಾಪುರ, ಮುದ್ಲಾಪುರ (ಮಟ್ಟಿ ಮುದ್ಲಾಪುರ ಮತ್ತು ಹೊಳೆ ಮುದ್ಲಾಪುರ), ಬೇವಿನಹಳ್ಳಿ, ಶಹಪುರ & ಲಿಂಗದಳ್ಳಿ, ಬಂಡಿಹರ್ಲಾಪುರ (ಹಳೆ ಬಂಡಿಹರ್ಲಾಪುರ ಮತ್ತು ಹೊಸಬಂಡಿಹರ್ಲಾಪುರ), ಅಗಳಕೇರಾ ಮತ್ತು ಶಾಸ್ತ್ರಿನಗರ, ಶಿವಪುರ, ಬಸಾಪುರ, ಮಹಮ್ಮದ್ ನಗರ, ನಾರಾಯಣ ಪೇಟೆ ಹಾಗೂ ಕವಳಿ, ಈ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply