This is the title of the web page
This is the title of the web page

Please assign a menu to the primary menu location under menu

State

ಡಿಸೆಂಬರ್ ೧೭ ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ


ಗದಗ ಡಿಸೆಂಬರ್ ೧೫ : ಸರ್ಕಾರದ ಆದೇಶದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಮತ್ತು ಆಯಾ ತಾಲೂಕುಗಳ ತಹಶೀಲ್ದಾರರು ತಾಲೂಕಿನ ಆಯ್ದ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಸಲಿದ್ದಾರೆ.
ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷವಾಕ್ಯದೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರೋಣ ತಾಲೂಕಿನ ಕಳಕಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಡಿಸೆಂಬರ್ ೧೭ ರಂದು ನಡೆಸುವರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿರುವರು.
ಡಿಸೆಂಬರ್ ೧೭ ರಂದು ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಆಯಾ ತಹಶೀಲ್ದಾರರು ಆಯ್ದ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಲಿದ್ದು ವಿವರ ಇಂತಿದೆ: ಗದಗ ತಾಲೂಕಿನ ಸೀತಾಲಹರಿಯಲ್ಲಿ ಕಿಶನ್ ಕಲಾಲ, ನರಗುಂದ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಅಮರವಾಡಗಿ, ಗಜೇಂದ್ರಗಡ ತಾಲೂಕಿನ ಹೊಸರಾಂಪುರ ಗ್ರಾಮದಲ್ಲಿ ರಜನೀಕಾಂತ್ ಕೆಂಗೇರಿ, ಶಿರಹಟ್ಟಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕಲಗೌಡ ಪಾಟೀಲ, ಮುಂಡರಗಿ ತಾಲೂಕಿನ ದಿಂಡೂರ ಗ್ರಾಮದಲ್ಲಿ ಶೃತಿ ಮಲ್ಲಪ್ಪಗೌಡರ, ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಪರಶುರಾಮ ಸತ್ತಿಗೇರಿ ಅವರು ಸಾರ್ವಜನಿಕರಿಂದ ಕಂದಾಯ ವಿಷಯಕ್ಕೆ ಸಂಬಂಧಿಸಿದಂತೆ ಅಹವಾಲುಗಳನ್ನು ಪಡೆದು ಪರಿಹಾರ ನೀಡಲಿದ್ದಾರೆ.


Gadi Kannadiga

Leave a Reply