ಹುಕ್ಕೇರಿ: ಮಾರ್ಚ ೨ ರಂದು ಹುಕ್ಕೇರಿ ಪಟ್ಟಣದಲ್ಲಿ ಪ್ರಜಾದ್ವ£ ಯಾತ್ರೆಗೆ ೨೦ ರಿಂದ ೨೫ ಸಾವಿರ ಜನ ಸೇರುವ ಬೃಹತ್ ಸಮಾವೇಶ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಜರುಗಲಿದೆ.ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿದರು. ಅವರು ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಜಾದ್ವ£ ಸಭೆ ಪೂರ್ವಭಾವಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಬೈಪಾಸ ರಸ್ತೆಯ ಪಕ್ಕದಲ್ಲಿ £ರ್ಮಾಣಗೊಂಡಿರುವ ವೇದಿಕೆಯಲ್ಲಿ ಸಂಜೆ ೬ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪ್ರಜಾದ್ವ£ ಯಾತ್ರೆಯಲ್ಲಿ ಪಕ್ಷದ ರಾಜ್ಯ ಮುಖಂಡರಾದ ಕೆ.ಪಿಸಿಸಿ ಪ್ರದಾನ ಕಾರ್ಯದರ್ಶಿ ಸತೀಶ ಜಾರಕಿಹೊಳಿ.ಎಮ್.ಬಿ ಪಾಟೀಲ,ಜಮೀರ ಅಹ್ಮದ, ಸೇರಿದಂತೆ ಜಿಲ್ಲೆಯ ಪಕ್ಷದ ಶಾಸಕರು. ಪಾಲ್ಗೊಳ್ಳುವರು.
ಭ್ರಳ್ಟಾಚಾರ ಸರಕಾರ-ಭಾರತೀಯ ಜನತಾ ಪಕ್ಷದ ಭ್ರಳ್ಟಾಚಾರ ,ದುಬಾರಿ ಬೆಲೆಯ,ದುರಾಡಳಿತದಿಂದ ಸಾಮಾನ್ಯ ಜನರ ಜೀವನ ಮೇಲೆ ಬರೆ ಎಳೆದಂತಾಗಿದೆ. ದಿನ £ತ್ಯದ ಬಳಕೆಯ ಅಗತ್ಯ ವಸ್ತುಗಳಾದ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಬೆಳೆ ಕಾಳುಗಳ ಬೆಲೆಗಳನ್ನು ಹೆಚ್ಚಿಸಿ ಬಡವರ ಕೂಲಿಕಾರರ ಮತ್ತು ಮದ್ಯಮ ವರ್ಗದ ಜನರ ಬದುಕುವದು ಕಳ್ಟವಾಗಿದೆ.
ಬರುವ ೨೩ ರ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿ ಜೆ ಪಿ ಪಕ್ಷಕ್ಕೆ ತಕ್ಕ ಉತ್ತರ £Ãಡಲಿದ್ದಾರೆ, ನಾನೇ ಅಭ್ಯರ್ಥಿ ಜನರಲ್ಲಿ ಗೊಂದಲ ಬೇಡ – ಹುಕ್ಕೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾನೆ ಅಭ್ಯರ್ಥ, ಜನರಲ್ಲಿ ದ್ವಂದ್ವ ಬೇಡ .ಬೆಳಗಾವಿ ಉತ್ತರ ಟಿಕೇಟ ಕೇಳಿದ್ದು £ಜ ಆದರೆ ಹುಕ್ಕೇರಿ ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದರು .ವಿರೋಧಿಗಳು ಜನರನ್ನು ದಾರಿ ತಪ್ಪಿಸುತ್ತಿದ್ದಾರೆಂದರು. ಪತ್ರಿಕಾಗೋಷ್ಠಿಯಲ್ಲಿ ಹುಕ್ಕೇರಿ ಬ್ಲಾಕ್ ಅಧ್ಯಕ್ಷ ವಿಜಯ ರವದಿ, ಸಂಕೇಶ್ವರ ಬ್ಲಾಕ್ ಅಧ್ಯಕ್ಷ ಸಂತೋಳ ಮುಡಸಿ, ಮಹಿಳಾಘಟಕ ಅದ್ಯಕ್ಷೆ ರೇಖಾ ಚಿಕ್ಕೋಡಿ, ಮುಖಂಡರಾದ ರಿಳಭ ಪಾಟೀಲ, ಅಲ್ಪ ಸಂಖ್ಯಾಘಟಕದ ಶಾನೂಲ ತಹಶಿಲ್ದಾರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ಸಿದ್ನಾಳ, ಜಿನಗೌಡ ಇಮಗೌಡನವರ,ಭೀಮಗೌಡ ಅಮ್ಮಣಗಿ, ಕರುಣಾಕರ ಶೆಟ್ಟಿ, ಚಂದು ಗಂಗಣ್ಣವರ, ಗವಿಶ ರವದಿ ಮತ್ತಿತರರು ಉಪಸ್ಥಿತರಿದ್ದರು.
Gadi Kannadiga > Local News > ಪ್ರಜಾಧ್ವನಿ ಯಾತ್ರೆಯ ಪೂರ್ವಭಾವಿ ಸಭೆ