WhatsApp Group
Join Now
ಗಂಗಾವತಿ.ಮೇ.: ಎಲ್ಲಾ ಸ್ವಸಹಾಯ ಸಂಘದ ಮಹಿಳಾ ಕಟುಂಬಗಳಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ವಿಮೆಯನ್ನು ಒಕ್ಕೂಟದ ಸಿಬ್ಬಂದಿಗಳು ಮಾಡಿಸಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ಹೇಳಿದರು.
ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಬುಧವಾರದಂದು ಆಯೋಜಿಸಿದ್ದ ಎನ್ ಆರ್ ಎಲ್ ಎಮ್ ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿಮಾತನಾಡಿದ ಅವರು, ಗ್ರಾಮೀಣ ಭಾಗದ ಎಲ್ಲ ಕುಟುಂಬಗಳಿಗೆ ಸರಕಾರದ ವಿಮೆ ಯೋಜನೆಗಳನ್ನು ತಲುಪಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಎನ್ ಆರ್ ಎಲ್ ಎಮ್ ಸಂಜೀವಿನಿಯಡಿ ಗ್ರಾ.ಪಂ ಮಹಿಳಾ ಒಕ್ಕೂಟದ ಕೆಲಸ ಮಾಡುವ ಎಂ.ಬಿ.ಕೆ., ಎಲ್ ಸಿಆರ್ ಪಿ, ಪಶು ಸಖಿ, ಕೃಷಿ ಸಖಿ ಅವರು ಒಂದು ಗ್ರಾಪಂ ವ್ಯಾಪ್ತಿಯಲ್ಲಿ 1000 ಮಹಿಳೆಯರಿಗೆ ವಿಮೆ ಯೋಜನೆ ಮಾಡಿಸಬೇಕು. ಇದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ.
ಎನ್ ಆರ್ ಎಲ್ ಎಮ್ ಸಂಜೀವಿನಿ ಯೋಜನೆಯಡಿ ದೊರೆಯುವ ಸಾಲ, ಸೌಲಭ್ಯ, ಸಮುದಾಯ ಬಂಡವಾಳ ನಿಧಿ ಸೇರಿ ಇತರೆ ಸರಕಾರಿ ಯೋಜನೆಗಳನ್ನು ಅರ್ಹ ಕುಟುಂಬಗಳಿಗೆ ತಲುಪಿಸಬೇಕು. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಸಹಾಯ ಸಂಘದ ಮಹಿಳಾ ವಾಹನ ಚಾಲಕರು, ಕಸ ವಿಲೇವಾರಿ ಮಾಡುವ ಮಹಿಳಾ ಸಿಬ್ಬಂದಿಗೆ ಸಕಾಲದಲ್ಲಿ ಗೌರವಧನ ಪಾವತಿಸಬೇಕು ಎಂದು ಸೂಚಿಸಿದರು.
ಘನತ್ಯಾಜ್ಯ ವಿಲೇವಾರಿ ಘಟಕ, ಬಳಕೆದಾರರ ಕರವಸೂಲಿ, ಎನ್ ಆರ್ ಎಲ್ ಎಮ್ ಶೆಡ್ ನಿರ್ಮಾಣ, ಪ್ರಧಾನಮಂತ್ರಿ ವನಧನ ವಿಕಾಸ ಯೋಜನೆ, ಪಂಚಾಯತ್ ರಾಜ್ ಸಂಸ್ಥೆ ಸಮುದಾಯ ಆಧಾರಿತ ಒಗ್ಗೂಡಿಸುವ ಯೋಜನೆ, ಬ್ಯಾಂಕ್ ಲಿಂಕೇಜ್, ನಲ್ ಜಲ್ ಮಿತ್ರ, ಮಾಸಿಕ ಸಂತೆ, ಕೆ.ಎಂ.ಎಫ್ ಮಹಿಳಾ ಸಂಘಗಳು, ನಮೋ ಡ್ರೋನ್ ದೀದಿ ಯೋಜನೆ, ಈ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಗತಿ ಮಾಹಿತಿ ಪಡೆದರು.
ಸಂಜೀವಿನಿ ಯೋಜನೆ ಜಿಲ್ಲಾ ವ್ಯವಸ್ಥಾಪಕ ಯಂಕೋಬ ಅವರು ಮಾತನಾಡಿ, ಲಿಂಗತ್ವ ಸಮಾನತೆ ಹಾಗೂ ಮಹಿಳಾ ಸಂಘಗಳ ಹೊಸ ರಚನೆ, ಪಂಚಾಯತ್ ರಾಜ್ ಸಂಸ್ಥೆಗಳ ಸಮುದಾಯ ಆಧಾರಿತ ಯೋಜನೆ ಕುರಿತು ಮಾಹಿತಿ ನೀಡಿದರು.
ಎಸ್ ಬಿ ಐ ಬ್ಯಾಂಕ್ ಆರ್ಥಿಕ ಸಾಕ್ಷಾರತಾ ಸಲಹೆಗಾರ ಆಂಜನೇಯ ಮಾತನಾಡಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ವಿಮೆ ಕುರಿತು ಮಾಹಿತಿ ನೀಡಿದರು.
ಎನ್ ಆರ್ ಎಲ್ ಎಮ್ ಸಂಜೀವಿನಿ ಪ್ರಭಾರ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಿಕಾರ್ಜುನ, ಕೃಷಿ ತಾಲೂಕು ವ್ಯವಸ್ಥಾಪಕ ಮುದ್ದಾಣೇಶ, ತಾಲೂಕು ಸಂಯೋಜಕ ಜ್ಯೋತಿ, ಡಿಇಓ ಮಂಜುನಾಥ ಜೋಗದ, ಸಿಬ್ಬಂದಿ ಕೀರ್ತಿ, ದುರುಗಮ್ಮ, ಎಲ್ಲಾ ಗ್ರಾ.ಪಂ ಎಂ.ಬಿ.ಕೆ., ಎಲ್ ಸಿಆರ್ ಪಿ, ಪಶು ಸಖಿ, ಕೃಷಿ ಸಖಿ ಹಾಗೂ ಒಕ್ಕೂಟದ ಅಧ್ಯಕ್ಷರು ಇದ್ದರು..