ಗಡಿ ಕನ್ನಡಿಗ ಸುದ್ದಿ
ಖಾನಾಪುರ:ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಅನ್ನೋದೆ ಕನಸಿನ ಮಾತಾಗಿದೆ. ಪ್ರತಿಯೊಂದಕ್ಕೂ ಇಲ್ಲಿನ ಸಿಬ್ಬಂದಿ ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಇಲ್ಲಿ ಬರುವ ರೋಗಿಗಳ ಪ್ರತೀ ಚಿಕಿತ್ಸೆಗೂ ಇಲ್ಲಿನ ಸಿಬ್ಬಂದಿ ದರ ನಿಗದಿ ಮಾಡಿದ್ದು ಬಡ ರೈತರ ಪಾಲಿಗೆ ಸಾರ್ವಜನಿಕ ಆಸ್ಪತ್ರೆ ಚಿಕಿತ್ಸೆ ಕೈಗೆಟುಕದಂತಾಗಿದೆ. ರೋಗಿಗಳು ನಮ್ಮ ಹತ್ರ ಹಣ ಇಲ್ಲ ಅಂದ್ರೂ, ಅವು ಎಲ್ಲಾ ನನಗೆ ಹೇಳಬೇಡ ಎಂಬಂತೆ ಹೇಳಿರುವುದು ಕಂಡುಬಂದಿದೆ.
ಅದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಕುಗ್ರಾಮವಾಗಿರುವ ಬಡ ರೈತರೊಬ್ಬರು ತನ್ನ ಹರ್ನಿಯಾ ಶಸ್ತ್ರಚಿಕಿತ್ಸೆಗೆಂದು ಖಾನಾಪುರ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಾರೆ ಆದರೆ ಚಿಕಿತ್ಸೆಗೂ ಮೊದಲೇ ದರ ನಿಗದಿ ಮಾಡಿದ ಇಲ್ಲಿನ ಸಿಬ್ಬಂದಿ ಶಸ್ತ್ರಚಿಕಿತ್ಸೆ ಬಳಿಕ ಹಣ ಕೊಟ್ಟರೆ ಮಾತ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡುವದಾಗಿ ರೋಗಿಗೆ ಬೆದರಿಕೆ ಒಡ್ಡಿ ಆಸ್ಪತ್ರಯಲ್ಲೇ ಇಟ್ಟುಕೊಂಡ ಘಟನೆ ನಡೆದಿದೆ. ಇದರಿಂದ ರೋಸಿಹೋದ ಬಡ ಕುಟುಂಬ ದಿಕ್ಕುತೋಚದಂತಾಗಿದ್ದು ಸುಳ್ಳಲ್ಲ.
ಈ ವೇಳೆ ಉದಯವಾಣಿ ಜೊತೆ ಮಾತನಾಡಿ ರೋಗಿಯ ಸೊಸೆ ನಾವು ನಾಲ್ಕು ದಿನದ ಹಿಂದೆ ನಮ್ಮ ಮಾವನವರ ಹಾರ್ನಿಯಾ ಶಸ್ತ್ರಚಿಕಿತ್ಸೆಗೆಂದು ಖಾನಾಪುರ ಸಾರ್ವಜನಿಕ ಆಸ್ಪತ್ರೆಗೆ ಬಂದಾಗ ಆಪರೇಶನ್ ಮಾಡಲು ಐದು ಸಾವಿರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು ಆಗ ನಾವು ಒಪ್ಪಿಕೊಂಡೆವು ಆದರೆ ಚಿಕಿತ್ಸೆ ಮುಗಿದ ಬಳಿಕ ನಾವು ಬಡವರು ಎಂದು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ವೈದ್ಯರ ಮನ ಕರಗದೇ ನಾಲ್ಕು ಸಾವಿರ ಕೊಟ್ಟರೇ ಮಾತ್ರ ಮನೆಗೆ ಕಳಿಸುತ್ತೇವೆಂದರು ಎಂದು ಅಳಲು ತೋಡಿಕೊಂಡರು.
ಹಣ ವಸೂಲಿಯಲ್ಲಿ ವೈದ್ಯರ ಪಾತ್ರವೂ ಇರುವುದರಿಂದ ಗ್ರಾಮೀಣ ಭಾಗದಿಂದ ಬರುವ ಬಡರೋಗಿಗಳು ರೋಸಿ ಹೋಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಪಡೆಯುತ್ತಿರುವ ಸಿಬ್ಬಂದಿ ಹಾಗೂ ಇದರಲ್ಲಿ ಭಾಗಿಯಾಗಿರುವ ವೈದ್ಯರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
*ತಾಲೂಕು ವೈದ್ಯಾಧಿಕಾರಿಗೂ ಇದರಲ್ಲಿ ಪಾಲಿದೆಯಾ..??*
ಹೀಗೆ ಆಸ್ಪತ್ರೆಗೆ ಬರುವ ರೋಗಿಗಳ ಹತ್ತಿರ ಪ್ರತೀ ಚಿಕಿತ್ಸೆಗೂ ದರ ನಿಗದಿ ಮಾಡಿರುವ ಆಸ್ಪತ್ರೆ ಸಿಬ್ಬಂದಿ ಹೆರಿಗೆ ಸೇರಿದಂತೆ ಉಳಿದ ಶಸ್ತ್ರಚಿಕಿತ್ಸೆ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದು ಆಸ್ಪತ್ರೆ ಸಿಬ್ಬಂದಿಗಳ ಭ್ರಷ್ಟಾಚಾರದ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿ ಮಹೇಶ ಕಿವಡಸನ್ನವರ ಅವರಿಗೆ ಗೊತ್ತಿಲ್ಲವಾ ಅಥವಾ ಗೊತ್ತಿದ್ದು ಸುಮ್ಮನಿದ್ದಾರಾ ಇಲ್ಲವೇ ಆ ಪಾಪದ ಹಣದಲ್ಲಿ ಅವರಿಗೂ ಪಾಲಿದೆಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.
ಬಾಕ್ಸ್: ನಾವು ನಮ್ಮ ಮಾವನವರ ಹಾರ್ನಿಯಾ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರುವ ಮೊದಲೇ ಇಲ್ಲಿನ ವೈದ್ಯರು ಚಿಕಿತ್ಸೆ ಮಾಡಲು ಐದು ಸಾವಿರ ಬೇಡಿಕೆ ಇಟ್ಟಿದ್ದರು ಚಿಕಿತ್ಸೆ ಮುಗಿದ ಬಳಿಕ ನಾವು ಎಷ್ಟೇ ಅಂಗಲಾಚಿದರೂ ದುಡ್ಡು ಕೊಟ್ಟರೆ ಮಾತ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡುವದಾಗಿ ನಮ್ಮನ್ನ ಆಸ್ಪತ್ರೆಯಲ್ಲೇ ಉಳಿಸಿಕೊಂಡರು.
ಅಂಬಿಕಾ ಕೋಲಕಾರ(ರೋಗಿಯ ಸೊಸೆ)
ಬಾಕ್ಸ್ ೨:ಇದು ಸಾರ್ವಜನಿಕರ ಆಸ್ಪತ್ರೆ ಇಲ್ಲಿ ಬಡವರಿಗೆ ಎಲ್ಲ ಉಚಿತವಾಗಿಯೇ ದೊರೆಯಬೇಕು ಈ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ ನಾನು ಈ ಕೂಡಲೇ ಇದನ್ನ ಸರಿ ಮಾಡುವ ವ್ಯವಸ್ಥೆ ನಾಡುತ್ತೇನೆ.
ಮಹೇಶ ಕಿವಡಸನ್ನವರ(ತಾಲ್ಲೂಕು ವೈಧ್ಯಾದಿಕಾರಿ,ಖಾನಾಪುರ)