ಬೆಳಗಾವಿ; ಚುರುಮುರಿಯ ಚಲನಚಿತ್ರ ಇದೆ 13 ರಂದು ಬೆಳಗಾವಿಯಲ್ಲಿ ಸಂತೋಷ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಲೇಖಕಿ,ಹಿರಿಯ ಸಾಹಿತಿ ಶ್ರೀಮತಿ. ನೀಲಗಂಗಾ ಚಿರಂತಿಮಠ ಹೇಳಿದರು.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ತನ್ನವರಿಂದಲೇ ತಾತ್ಸಾರಕ್ಕೆ ಒಳಗಾಗಿ ಅವಮಾನಗೊಂಡು ತನ್ನವರನ್ನೆಲ್ಲ ಬಿಟ್ಟು ಪರ ಊರಿಗೆ ಬಂದು ಊರೂರು ತಿರುಗಿ ಗಲ್ಲಿ ಗಲ್ಲಿ ತಿರುಗಿ “ಚುರುಮುರಿ” ಮಾರಾಟ ಮಾಡುತ್ತಾ ಜೀವನ ಸವಿಸಿದ ವೃದ್ಧ ವ್ಯಕ್ತಿಯೊಬ್ಬನ ನೈಜ ಕಥೆಯನ್ನು ಆಧರಿಸಿದ ಚಲನಚಿತ್ರ ಇದಾಗಿದೆ ಎಂದವರು ವಿವರಿಸಿದರು.
ಸುಪ್ರಿಯಾ ನಿಪ್ಪಾಣಿ ಅವರ ನಿರ್ದೇಶನ ಮತ್ತು ನಿರ್ಮಾಣದ ಚಿತ್ರದಲ್ಲಿ ಮಹಾದೇವ ಹಡಪದ ಮತ್ತು ಶಾರದ ಮುಳ್ಳೂರ್ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇಡೀ ಜೀವನವನ್ನು ತನ್ನ ಕುಟುಂಬಕ್ಕಾಗಿ ಮುಡಿಪಾಗಿಟ್ಟ ವ್ಯಕ್ತಿಯೊಬ್ಬ ಕೊನೆಗೆ ತನ್ನ ಸರ್ವಸ್ವವನ್ನು ಕುಟುಂಬದ ಸದಸ್ಯರಿಗೆ ಅರ್ಪಿಸಿ ಮನೆಯಿಂದ ಹೊರ ಬಂದು ಒಂಟಿಯಾಗಿ ಬದುಕಿದ “ಚುರುಮುರಿ” ಮಾರುವವನೊಬ್ಬನ ಕುರಿತು ನೀಲಗಂಗಾ ಚರಂತಿಮಠ ಅವರು ಬರೆದ ಕಲಾತ್ಮಕ ಚಿತ್ರ ಕಥೆ ಇದಾಗಿದೆ. ಬೇರೆ ಬೇರೆ ಊರುಗಳ ಸಂತೆಗಳಲ್ಲಿ ಮತ್ತು ಜಾತ್ರೆಗಳಲ್ಲಿ “ಚುರುಮುರಿ” ಮಾರಲು ತಿರುಗಾಡುವ ಈತನಿಗೆ ಆಗಾಗ ಆತನ ಸಂಬಂಧಿಕರು ಅಲ್ಲಿ ಭೇಟಿಯಾದಾಗ ತಾತ್ಕಾಲಿಕವಾಗಿ ಆತ ಅನುಭವಿಸುವ ಸಂತಸ, ನಂತರದ ನಿರ್ಲಿಪ್ತತೆ ಮತ್ತು

ಯಾತನೆಯನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ ಎಂದವರು ವಿವರಿಸಿದರು.
ಪತ್ರಿಕಾ ಪರಿಷತ್ತಿನಲ್ಲಿ ಡಾ. ಭಾರತಿ ಮಠದ, ದೀಪಿಕಾ ಚಾಟೆ ಮತ್ತು ಸುನಂದಾ ಎಮ್ಮಿ ಉಪಸ್ಥಿತರಿದ್ದರು.