ಬೆಳಗಾವಿ,ಅ.೧೪ : ಮಯೂರ ಧರ್ಮಾಜಿ ಪಾಟೀಲ್ ಕಲ್ಮೇಶ್ವರ ಗಲ್ಲಿ ಯಳ್ಳೂರ ಇವರಿಂದ ಒಂದು ಲಕ್ಷ ರೂಪಾಯಿಗಳ ಬಾಂಡ್ ಮೊತ್ತವು ಬಾಕಿ ಇರುವುದರಿಂದ, ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ, ವಸೂಲಿ ಮಾಡಲು ನ್ಯಾಯಾಲಯವು ಆದೇಶ ನೀಡಿದೆ.
ಮೊತ್ತದ ವಸೂಲಾತಿಗಾಗಿ ಬಾಕೀದಾರರ ಮಾಲ್ಕೀಯ ಯಳ್ಳೂರ ಗ್ರಾಮದ ರಿಸನಂ.೧೧೦೩/೧/೧ ಆಸ್ತಿಯನ್ನು ಅಕ್ಟೋಬರ್ ೨೭ ರಂದು ಮುಂಜಾನೆ ೧೧ ಗಂಟೆಗೆ ಬೆಳಗಾವಿ ತಹಸೀಲ್ದಾರ್ ಇವರಿಂದ ಅಧಿಕಾರ ಪಡೆದ ಅಧಿಕಾರಿಯ ಸಮ್ಮುಖದಲ್ಲಿ ಬಹಿರಂಗ ಹರಾಜು ಮಾಡುವುದರ ಮೂಲಕ ವಸೂಲಾತಿ ಕೈಗೊಳ್ಳಲಾಗುವುದು. ಆಸಕ್ತಿಯುಳ್ಳ ವ್ಯಕ್ತಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ತಹಸೀಲ್ದಾರ ಅವರ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಕಂದಾಯ ಇಲಾಖೆ : ಅ.೨೭ ರಂದು ಆಸ್ತಿ ಬಹಿರಂಗ ಹರಾಜು ಪ್ರಕ್ರಿಯೆ
More important news
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023