ಕೊಪ್ಪಳ: ಓರ್ವ ಕಾಂಗ್ರೆಸ್ ಕಡು ಭ್ರಷ್ಟ ಹಾಗೂ ಇನ್ನೋರ್ವ £ರ್ಮಿತಿ ಕೇಂದ್ರದ ಲೂಟಿಕೋರ. ಇವರಿಬ್ಬರಲ್ಲಿ ಯಾರಿಗೆ ಕ್ಷೇತ್ರ ಕೊಟ್ಟರೂ ಕ್ಷೇತ್ರ ಹಾಳಾಗಲಿದೆ. ಅವರಿಗೆ ಕ್ಷೇತ್ರ £Ãಡದೇ ಮಹಿಳೆಗೆ ಅವಕಾಶ £Ãಡಿ ಗೆಲ್ಲಿಸಬೇಕು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಹಿಳೆಯಿಂದ ಸಾಧ್ಯ. ಆದ್ದರಿಂದ ಬಿಜೆಪಿ ಗುರುತಿಗೆ ಮತ £Ãಡಿ ಗೆಲ್ಲಿಸಬೇಕು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಕೊಪ್ಪಳ ನಗರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಮತಯಾಚನೆ ನಡೆಸಿದ ಅವರು, ಕೊಪ್ಪಳ ಕ್ಷೇತ್ರದಿಂದ ಎರಡು ಬಾರಿ ಗೆಲ್ಲಿಸಿ ಕಳುಹಿಸಿದ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್, ಬೆಂಗಳೂರಿನ ಶಾಸಕರ ಭವನದಲ್ಲಿ ಲಂಚಪಡೆದು ಕ್ಷೇತ್ರದ ಮಾನ – ಮಾರ್ಯಾದೆ ಹಾಳು ಮಾಡಿದ್ದಾರೆ. ಇಂತವರ ಕೈಗೆ ಕ್ಷೇತ್ರ ಕೊಡಬೇಕೆ? ಇವರ ಕೈಗೆ ಕ್ಷೇತ್ರ ಕೊಡುವ ಬದಲು ಮಹಿಳೆಯ ಕೈಯಲ್ಲಿ ಕ್ಷೇತ್ರ £Ãಡಿ ಎಂದು ಮನವಿ ಮಾಡಿದರು.
ಕ್ಷೇತ್ರದಲ್ಲಿ ಇನ್ನೊಬ್ಬ £ರ್ಮಿತಿ ಕೇಂದ್ರದ ಲೂಟಿಕೋರ ಸ್ಪರ್ಧಿಸಿದ್ದು, ಲೋಕಾಯುಕ್ತದಲ್ಲಿ ತ£ಖೆ ನಡೆಯುತ್ತಿದೆ. ಇಲಾಖೆಯನ್ನೇ ಲೂಟಿ ಮೂಡಿದ ಇವರು ಗೆದ್ದರೆ ಕ್ಷೇತ್ರವನ್ನೇ ಲೂಟಿ ಮಾಡುವುದಿಲ್ಲವೇ? ಇವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಭ್ರಷ್ಟಾಚಾರ ಮುಕ್ತ ಆಡಳಿತ £Ãಡುತ್ತಿರುವ ಬಿಜೆಪಿಗೆ ಮತ £Ãಡಿದರೆ, ಕ್ಷೇತ್ರದ ಅಭಿವೃದ್ಧಿ ಆಗಲಿದೆ. £ಮ್ಮ ಮನೆ ಮಗಳಾದ ಮಂಜುಳಾ ಅಮರೇಶ ಕರಡಿ ಅವರಿಗೆ ಮತ £Ãಡಿ ಎಂದರು.
ಕೇಂದ್ರ ಹಾಗೂ ಬಿಜೆಪಿ ಸರ್ಕಾರವು ಹಲವಾರು ಯೋಜನೆ ಮೂಲಕ ಜನರ ಜೀವನ ಮಟ್ಟ ಸುಧಾರಿಸುತ್ತಿದೆ. ಯೋಜನೆಗಳ ಹಣವನ್ನು ನೇರವಾಗಿ ಖಾತೆಗೆ ಹಾಕುವ ಮೂಲಕ ಭ್ರಷ್ಟಾಚಾರ ರಹಿತ ಆಡಳಿತ £Ãಡಲಾಗುತ್ತಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ, ಕುಡಿಯವ £Ãರು, ಶೌಚಾಲಯ ಸೇರಿ ಮೂಲ ಸೌಕರ್ಯ ದೊರಕಿಸದೇ ಕಾಂಗ್ರೆಸ್ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದರೂ, ಇವರ ಸಾಧನೆ ಶೂನ್ಯವಾಗಿದೆ. ಇಂತವರಿಗೆ ಕ್ಷೇತ್ರ £Ãಡಬೇಡಿ. ಮಹಿಳೆಗೆ ಕ್ಷೇತ್ರ £Ãಡಿದರೆ, ಮನೆ £ರ್ವಹಣೆ ಯಂತೆ ಕ್ಷೇತ್ರ £ರ್ವಹಣೆ ಮಾಡುತ್ತಾರೆ ಎಂದು ತಿಳಿಸಿದರು.
ಸೇತುವೆಗಳ £ರ್ಮಾಣಕ್ಕೆ ಆದ್ಯತೆ: ಕವಲೂರು, ರಂಗನಾಥನ ಹಳ್ಳಿ, ಕಬ್ಬಾಳ, ಬೋಚನಹಳ್ಳಿ ಸೇರಿದಂತೆ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಮೇಲ್ಸತುವೆಗಳು ಹಾಳಾಗಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಶಾಸಕರು ಚುನಾವಣೆ ವೇಳೆಗೆ ಮಾತ್ರ ಹಳ್ಳಿಗಳಿಗೆ ತೆರಳುತ್ತಿದ್ದು, ಸೇತುವೆಗಳ ಸ್ಥಿತಿ ಬಗ್ಗೆ ಯೋಜನೆಯೇ ಇಲ್ಲ. ಇದರಿಂದ ಮಳೆ £Ãರು ಜಮೀನುಗಳಿಗೆ ನುಗ್ಗುತ್ತಿವೆ. ಸಂಚಾರ ದುಸ್ಥರವಾಗಿದೆ. ಈ ಸೇತುವೆಗಳ ದುರಸ್ತಿ ಗೆ ಸಾವಿರಾರು ಕೋಟಿ ರೂ. ಬೇಕಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ತಕ್ಷಣವೇ ಹೊಸ ಸೇತುವೆ £ರ್ಮಿಸಲಾಗುವುದು ಎಂದರು.
ಕಾರ್ಖಾನೆಗಳಲ್ಲಿ ಶೇ. ೯೦ ರಷ್ಟು ಮಂದಿಗೆ ಉದ್ಯೋಗ £Ãಡುವೆ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ೧೪ ಬೃಹತ್ ಹಾಗೂ ನೂರಕ್ಕೂ ಅಧಿಕ ಮಧ್ಯಮ ಕಾರ್ಖಾನೆಗಳಿವೆ. ಆದರೂ, ಕ್ಷೇತ್ರದಲ್ಲಿ £ರುದ್ಯೋಗ ಸಮಸ್ಯೆ ಇದೆ. ಈ ಕಾರ್ಖಾನೆಗಳಲ್ಲಿ ಸ್ಥಳೀಯರ ಸಂಖ್ಯೆ ತೀರ ಕಡಿಮೆ ಇದೆ. ಬಿಜೆಪಿಗೆ ಮತ £Ãಡಿ, ಮಂಜುಳಾ ಕರಡಿ ಗೆಲುವು ಸಾಧಿಸಿದರೆ, ಶೇ. ೯೦ ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ £Ãಡಲಾಗುವುದು. ಈ ಮೂಲಕ £ರುದ್ಯೋಗ ಸಮಸ್ಯೆ ಪರಿಹರಿಸಲಾಗುವುದು. ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗ £Ãಡಲೇಬೇಕು ಎಂದು ಪ್ರತಿ ಕಾರ್ಖಾನೆಗಳಿಗೆ ಭೇಟಿ £Ãಡಿ ಉದ್ಯೋಗ £Ãಡಿಸುತ್ತೇನೆ ಎಂದರು.
Gadi Kannadiga > State > ಭ್ರಷ್ಟ, ಲೂಟಿಕೋರರ ಕೈಗೆ ಕ್ಷೇತ್ರ £Ãಡದೇ ಮಹಿಳೆ ಗೆಲ್ಲಿಸಿ: ಸಂಗಣ್ಣ
ಭ್ರಷ್ಟ, ಲೂಟಿಕೋರರ ಕೈಗೆ ಕ್ಷೇತ್ರ £Ãಡದೇ ಮಹಿಳೆ ಗೆಲ್ಲಿಸಿ: ಸಂಗಣ್ಣ
Suresh08/05/2023
posted on
More important news
ಮಹಿಳೆ ನಾಪತ್ತೆ
02/06/2023
ಯಮನಪ್ಪ ಧರನಾಯಕ್ ನಿಧನ
02/06/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023