ಹಳ್ಳೂರ ೦೪: ದೇಶದ ಸ್ವತಂತ್ರ ಪೂರ್ವದಲ್ಲಿ ಮಹಿಳೆಯರಿಗೆ ಶಿಕ್ಷಣ £Ãಡಿದ ಮಹಾತಾಯಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯವರು ಸಮಾಜಕ್ಕೆ £Ãಡಿದ ಕೊಡುಗೆ ಅಪಾರವಾದದ್ದು ಎಂದು ಅಧ್ಯಕ್ಷ ಬಸವಣ್ಣಿ ಬಂಬಲವಾಡ ಹೇಳಿದರು. ಅವರು ಬೆಲ್ಲದ ಬಾಗೇವಾಡಿಯ ಮಾಲಗಾರ ಸಮಾಜದ ಕಚೇರಿಯಲ್ಲಿ ಹಮ್ಮಿಕೊಂಡ ಸಾವಿತ್ರಿ ಬಾಯಿ ಫುಲೆಯವರ ೧೯೧ನೇ ಜಯಂತಿ ಆಚರಣೆಯಲ್ಲಿ ಮಾತನಾಡಿ ಸಾವಿತ್ರಿ ಬಾಯಿ ಪುಲೆಯವರು ತನ್ನ ೧೪ನೇ ವಯಸ್ಸಿ ನಲ್ಲಿ ಜ್ಯೋತಿಭಾ ಪುಲೆಯವರನ್ನು ಮದುವೆ ಆಗಿ ಮೊದಲ ಶಿಕ್ಷಕರನ್ನಾಗಿ ಮಾಡಿಕೊಂಡರು. ಬಾಲ್ಯ ವಿವಾಹ, ಅ£ಷ್ಟ ಪದ್ದತಿ ತಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ಆಗಿನ ಕಾಲದಲ್ಲಿ ವಿದ್ಯಾಭ್ಯಾಸ ಪುರುಷರಿಗೆ, ಮೇಲ್ಜಾತಿಯವರಿಗೆ ಸೀಮಿತವಾಗಿದ್ದ ಕಾಲದಲ್ಲಿ ಮನೆ ಮನೆ ತೆರಳಿ ದಿನ ದಲಿತರಿಗೆ ಶಿಕ್ಷಣ ಕಲಿಸಲು ಹೊರಟಾಗ ಸೆಗಣಿ ಎರಚಿ, ಕಲ್ಲು ಎಸೆದರು ನೋವು ಅವಮಾನ ಮೆಟ್ಟು£ಂತು ಬ್ಯಾಗಿನಲ್ಲಿ ಬೇರೆ ಸೀರೆಯನ್ನು ಇಟ್ಟು ಸೀರೆ ಬದಲಾಯಿಸಿಕೊಂಡು ಪಾಠ ಮಾಡುತ್ತಿದ್ದರು. ಶಾಲೆಯನ್ನು ಪ್ರಾರಂಭಿಸಿ ಸ್ತಿçÃಯರಿಗೆ ಶಿಕ್ಷಣ £Ãಡಿದ ದಿಟ್ಟ ಮಹಾತಾಯಿ. ಇವತ್ತು ಸಮಾಜದ ಪ್ರತಿ ಸ್ತಿçÃಯರಿಗೆ ಶಿಕ್ಷಣ ಸಿಗಲು ಕಾರಣ ಸಾವಿತ್ರಿ ಬಾಯಿ ಪುಲೆಯೆಂದರು. ಪ್ರಾರಂಭದಲ್ಲಿ ಸಾವಿತ್ರಿ ಬಾಯಿಪುಲೆಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಮಯದಲ್ಲಿ ಸುಭಾಸ ಅಳ ಗುಂಡಿ. ಮಲ್ಲಿಕಾರ್ಜುನ ಅಳಗುಂಡಿ. ಅಶೋಕ ಅಳಗುಂಡಿ. ಭೀಮಶಿ ಅಳಗುಂಡಿ. ಪ್ರಕಾಶ ದೋಣವಾಡೆ. ಶಿದ್ದಪ್ಪ ಬಂಬಲವಾಡ. ರಾಮಲಿಂಗ ಬೆಳಕೂಡ.ಉಮೇಶ ದೋಣವಾಡೆ ಸೇರಿದಂತೆ ಬಾಗೇವಾಡಿ ಮಾಳಿ ಸಮಾಜದ ಬಾಂಧವರಿದ್ದರು.
Gadi Kannadiga > Local News > ಸಾವಿತ್ರಿ ಬಾಯಿ ಫುಲೆಯವರ ೧೯೧ನೇ ಜಯಂತಿ