This is the title of the web page
This is the title of the web page

Please assign a menu to the primary menu location under menu

Local News

ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿಭಾಯಿ ಪುಲೆ ಕೊಡುಗೆ ಅಪಾರ


ಯಮಕನಮರಡಿ:- ಸಾಮಾಜಿಕ ಅಸಮಾನತೆ ವಿರುದ್ದ ಹೋರಾಡಿ ಮಹಿಳೆಯರಿಗೆ ಶಿಕ್ಷಣದ ಹಕ್ಕು ಕೊಡಿಸಿದ ಏಕೈಕ ಮಹಿಳೆ ಸಾವಿತ್ರಭಾಯಿ ಪುಲೆ ಎಂದು ಶಿಕ್ಷಣ ಪ್ರೇಮಿ ಬಸವರಾಜ ಖಡಕಬಾಂವಿ ಹೇಳಿದರು.
ಅವರು ಮಂಗಳವಾರ ದಿ. ೦೩ ರಂದು ಹಿಡಕಲ್ ಡ್ಯಾಮಿನ ಸರ್. ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಶಿಕ್ಷಣ ವಂಚಿತ ಮಹಿಳೆಯರು ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿ£ಗೆ ತರಲು ಶಾಲೆಗಳನ್ನು ತೆರೆದಿದ್ದರು. ಶಾಲಾ ಕಟ್ಟಡಕ್ಕೆ £ರ್ಮಾಣಕ್ಕಾಗಿ ಮುಸ್ಲಿಂ ಮಹಿಳೆ ಫಾತೀಮಾ ಜಾಗ £Ãಡಿದರು. ಸತ್ಯಶೋದಕಿ ಆಧು£ಕ ಶಿಕ್ಷಣ ತಾಯಿ ಸಾವಿತ್ರಿಭಾಯಿ ಪುಲೆಯವರು ಶಿಕ್ಷಣದಲ್ಲಿ ವೈವಿದ್ಯತೆ ತಂದುಕೊಟ್ಟಿದ್ದಾರೆ. ತಮ್ಮ ಜೀವನವನ್ನು ಶಿಕ್ಷಣ ಮತ್ತು ಸಮಾಜ ಸುಧಾರಣೆಗಾಗಿ ಮುಡುಪಾಗಿಟ್ಟಿದ್ದರು ಎಂದು ಬಸವರಾಜ ಖಡಕಭಾಂವಿ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹುಕ್ಕೇರಿ ತಾಲೂಕಾಧ್ಯಕ್ಷ ಪ್ರಕಾಶ ಹೊಸಮ£ ಮಾತನಾಡಿ ಸಾವಿತ್ರಿಭಾಯಿ ಪುಲೆಯವರ ಆದರ್ಶಮಯ ಜೀವನ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ. ಅಂದಿನ ಕಷ್ಟಕಾಲದಲ್ಲಿಯೂ ಕೂಡ ಎದೆಗುಂದದೆ ಮಹಿಳೆಯರಿಗೆ ಶಿಕ್ಷಣ ಕಲ್ಪಿಸಿದ ಸಾವಿತ್ರಿಭಾಯಿ ಪುಲೆಯವರ ಶಿಕ್ಷಣದ ಸೇವೆ ಮೆಚ್ಚುವಂತಹದ್ದು ಎಂದು ಹೇಳಿದರು.
ಮುಖ್ಯ ಶಿಕ್ಷಕ ಉದಯಕುಮಾರ ಕಮ್ಮಾರ ಶಿಕ್ಷಕ ಎಸ್.ಆರ್. ಪಾಟೀಲ ಮಾತನಾಡಿದರು. ಬೆಣವಾಡ ಪ್ರೌಢಶಾಲೆಯ ವಿದ್ಯಾರ್ಥಿ£ ಲಕ್ಷ್ಮೀ ಭೀಮಪ್ಪಾ ರಕ್ಷಿ ಇವರು ಸಾವಿತ್ರಿಭಾಯಿ ಪುಲೆಯವರು ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಹಿಡಕಲ್ ಡ್ಯಾಮ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರುಪ್ಪ ತಳವಾರ, £ಂಗಪ್ಪಾ ಕಾಂಬಳೆ, ಭೀಮಶಿ ತಳವಾರ, ಭೀಮಪ್ಪಾ ರಕ್ಷಿ ಇದ್ದರು. ಶಿಕ್ಷಕಿ ಎಸ್.ಆಯ್ ಮುಲ್ಲಾ ಕಾರ್ಯಕ್ರಮ £ರೂಪಿಸಿದರು. ಶಿಕ್ಷಕರಾದ ಎಸ್.ಆರ್. ಕುಂದರಗಿ ವಂದಿಸಿದರು. ಸ್ಪೂರ್ತಿ ಮೇಗೇರಿ ಪಾರ್ಥನೆ ಗೀತೆ ಹಾಡಿದರು. ವಿದ್ಯಾರ್ಥಿಗಳಾದ ಮಾಳಪ್ಪಾ ನಾಗರಾಳಿ, ಮಂಜುನಾಥ ಪಾಟೀಲ, ಸುಪ್ರಿಯಾ ಪಾಟೀಲ, ಸಾವಿತ್ರಿಬಾಯಿ ಪುಲೆಯವರ ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಬಿ.ಎಸ್. ನಾಗನೂರಿ ಜೆ.ಎಸ್. ಪಾಟೀಲ, ಶಿಕ್ಷಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Leave a Reply