WhatsApp Group
Join Now
ಬೆಳಗಾವಿ: ತಾಲೂಕಿನ ಕಾಕತಿ ಗ್ರಾಮದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ದಿ28 ರಂದು 2025- 26ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಅತ್ಯಂತ ಸಡಗರದಿಂದ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಗೆ ಬಂದ ಮುದ್ದು ಮಕ್ಕಳಿಗೆ ಸರ್ಕಾರದಿಂದ ಕೊಡ ಮಾಡುವ ಉಚಿತ ಬಟ್ಟೆ ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು. ಶಾಲೆಯ ಮುಖ್ಯೋಧ್ಯಾಪಕ ಬಿ ಎನ್ ಮಡಿವಾಳರ ಮಾತನಾಡಿ ಸರ್ಕಾರದ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಉಪಯೋಗ ಮಾಡುವುದರ ಜೊತೆಗೆ ಮಕ್ಕಳು ನಿರಂತರವಾಗಿ ಗೈರು ಆಗದೆ ಶಾಲೆಗೆ ಬರಬೇಕು. ಶಾಲೆಯಲ್ಲಿ ಸ್ವಚ್ಛತೆ ಶಿಸ್ತನ್ನು ಕಾಪಾಡಬೇಕು. ಮಳೆಗಾಲ ಇರುವ ಕಾರಣ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಎಲ್ಲಾ ನಿಯಮಾವಳಿಗಳನ್ನು ಪಾಲಿಸಬೇಕು ಎಂದರು. ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಕೃಷ್ಣಾ ಕುರುಬರ ಮಾತನಾಡಿ ಪಾಲಕರು ಸಹ ಮಕ್ಕಳ ವೈಯಕ್ತಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಶಾಲೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡರೆ ಮಕ್ಕಳ ಶೈಕ್ಷಣಿಕ ಪ್ರಗತಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು. ಪ್ರೌಢ ಶಾಲೆಯ ಹಿರಿಯ ಶಿಕ್ಷಕಿ ಗೀತಾ ಕಾನಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜಯ ರಾಜಮನಿ, ಲಲಿತಾ ಮಹಾಜನ ಶೆಟ್ಟಿ, ಸುಮಿತ್ರಾ ರಾವುತ ಸುಮಿತ್ರಾ ಕರವಿನಕೊಪ್ಪ,ಶ್ರೀದೇವಿ ದಿಬ್ಬಿ, ಸುವರ್ಣಾ ಕೋಲಕಾರ, ಸಮೀಮಾ ಹುಬಳಿ, ಗೀತಾ ಗುಡಿ,ಎಸ್. ಎಸ್. ಮಾಲಕೋಜಿ, ಎಸ್. ಎಸ್. ಶಿರೆಪ್ಪನವರ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ಮಕ್ಕಳು ಮತ್ತು ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು,ಶ್ರೀದೇವಿ ಮರಕುಂಬಿ ನಿರೂಪಿಸಿದರು ಕೊನೆಯಲ್ಲಿ ಮಹೇಶ ಅಕ್ಕಿ ವಂದಿಸಿದರು.