ಗದಗ : ವಿಧಾನಸಭಾ ಚುನಾವಣೆಯಲ್ಲಿ ಗದಗ ಮತಕ್ಷೇತ್ರದಿಂದ ಭರ್ಜರಿ ಗೆಲುವನ್ನು ಪಡೆದ ಡಾ.ಎಚ್. ಕೆ. ಪಾಟೀಲ ಅವರ ಉಜ್ವಲ ಭವಿಷ್ಯಕ್ಕಾಗಿ ನಗರದ ಕರಿಯಮ್ಮದೇವಿ ಮಹಿಳಾ ಮಂಡಳದ ಸದಸ್ಯರು ಶ್ರೀ ಕರಿಯಮ್ಮ ದೇವಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಳದ ಅಧ್ಯಕ್ಷೆ ರೇಣುಕಾ ಕೇಸರಿ ಉಪಾಧ್ಯಕ್ಷೆ ಶಾಂತಾ ಹೊನಕೇರಿ, ಕಾರ್ಯದರ್ಶಿ ಅನಿತಾ ಜಕಬಾಳ, ಪದಾಧಿಕಾರಿಗಳಾದ ಗಂಗಾ ಚಕ್ರಣ್ಣವರ, ರೇಣುಕಾ ಯತ್ನಟ್ಟಿ, ಗಾಯತ್ರಿ ಹರ್ಲಾಪೂರ, ಗಂಗವ್ವ ನರ್ತಿ, ಪಾರ್ವತಿ ಮುದ್ಲಾಪೂರ, ಪಾರ್ವತಿ ಶಾಂತಗೇರಿ, ಬಸಮ್ಮಾ ಕುರಿ, ವಿಜಯಲಕ್ಷಿ÷್ಮ ಭಗವತಿ, ಅಕ್ಕಮಹಾದೇವಿ ಕಳ್ಳಿ, ಮುತ್ತಪ್ಪ ಪೂಜಾರಿ ಸೇರಿದಂತೆ ಉಪಸ್ಥಿತರಿದ್ದರು.