ಗದಗ ಅಗಸ್ಟ ೧೧: ಉದ್ಯಾನವನದಲ್ಲಿ ಉದಯರಾಗ ಹಾಗೂ ಸಂಧ್ಯಾರಾಗ ಕಾರ್ಯಕ್ರಮದಲ್ಲಿ ಅಗಸ್ಟ ೧೩ ರಂದು ರವಿವಾರ ಬೆಳಿಗ್ಗೆ:೬.೩೦ ರಿಂದ ೭.೩೦ ರವರೆಗೆ ನಡೆಯುವ ಉದಯರಾಗ ಕಾರ್ಯಕ್ರಮದಲ್ಲಿ ರಾಜೀವಗಾಂಧಿ ನಗರದ ಶಿವಶರಣ ಹರಳಯ್ಯ ಉದ್ಯಾನವನದಲ್ಲಿ ಪ್ರಸಾದ ಸುತಾರ ರವರಿಂದ “ವಚನ ಸಂಗೀತ” ವಿಶ್ವೇಶ್ವರಯ್ಯ ನಗರದ ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಯೋಗೆಶ್ವರಿ ಭಾವಿಕಟ್ಟಿ ಇವರಿಂದ “ಸುಗಮ ಸಂಗೀತ” ಸಾಯಂಕಾಲ: ೫.೩೦ ರಿಂದ ೬.೩೦ ಗಂಟೆಯವರೆಗೆ ಭೀಷ್ಮಕೆರೆಯ ಬಸವೇಶ್ವರ ಪುತ್ಥಳಿ ಆವರಣದಲ್ಲಿ ನಡೆಯುವ ಸಂಧ್ಯಾರಾಗ ಕಾರ್ಯಕ್ರಮದಲ್ಲಿ ಸೋಮಶೇಕರ ದೊಡ್ಡಮನಿ ಇವರಿಂದ “ಸುಗಮ ಸಂಗೀತ” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಉದ್ಯಾನವನದಲ್ಲಿ ಉದಯರಾಗ ಹಾಗೂ ಸಂಧ್ಯಾರಾಗ ಕಾರ್ಯಕ್ರಮ