ಗಡಿ ಕನ್ನಡಿಗ
ಖಾನಾಪುರ:ರೈತರೊಬ್ಬರಿಂದ ನಾಲ್ಕೂವರೆ ಸಾವಿರ ಲಂಚ ಪಡೆಯುವಾಗ ಸರ್ವೇಯರ್ ವಿನೋದ ಸಂಬನ್ನಿ ಲೋಕಾಯುಕ್ತ ಅಧಿಕಾರಿಗಳ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ .
ತಾಲೂಕಿನ ಕುಟಿನೊನಗರ ವ್ಯಾಪ್ತಿಯ ಮಮಸಾಪುರ ಗ್ರಾಮದ ಸದಾಶಿವ ಕಾಂಬಳೆ ಎನ್ನುವರ ಹತ್ತಿರ ಪಿ ಟಿ ಶೀಟ್ ಮಾಡಿಕೊಡಲು ಸರ್ವೇಯರ್ ವಿನೋದ ಸಂಬನ್ನಿ ಎಂಬುವವರು ನಾಲ್ಕೂವರೆ ಸಾವಿರ ಲಂಚ ಕೊಡುವಂತೆ ಹೇಳಿದ್ದರು ಇದರ ಬಗ್ಗೆ ಸದಾಶಿವ ಕಾಂಬಳೆ ಬೆಳಗಾವಿ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ದೂರು ದಾಖಲಾಗುತ್ತಿದ್ದಂತೆ ಲೋಕಾಯುಕ್ತ ಎಸ್ಪಿ ಹಣಮಂತರಾಯ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಭರತ್ ರೆಡ್ಡಿ ನೇತೃತ್ತದ ತಂಡ ತಾಲೂಕಿನ ಸರ್ವೆ ಇಲಾಖೆಯ ಕಚೇರಿಯಲ್ಲಿ ನಾಲ್ಕುವರೆ ಸಾವಿರ ಲಂಚ ಪಡೆಯುತ್ತಿದ್ದ ಸರ್ವೇಯರ್ ವಿನೋದ ಸಂಬನ್ನಿ ಅವರನ್ನ ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಸಂಗಮೇಶ್ ಹೊಸಮನಿ,ರವಿಕುಮಾರ್ ಧರ್ಮಟ್ಟಿ,ಮತ್ತು ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಉಪಸ್ಥತರಿದ್ದರು.