ಎಸ್‌ಜಿಬಿಐಟಿ ಎನ್‌ಎಸ್‌ಎಸ್ ಘಟಕದ ವತಿಯಿಂದ ರಸ್ತೆ ವಿಭಾಜಕಗಳ ದತ್ತು ಸ್ವೀಕಾರ

Murugesh Shivapuji
ಎಸ್‌ಜಿಬಿಐಟಿ ಎನ್‌ಎಸ್‌ಎಸ್ ಘಟಕದ ವತಿಯಿಂದ ರಸ್ತೆ ವಿಭಾಜಕಗಳ ದತ್ತು ಸ್ವೀಕಾರ
WhatsApp Group Join Now
ಬೆಳಗಾವಿ ; ನಗರದ ಶ್ರೀ ಸಿದ್ಧಾರಮೇಶ್ವರ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ ಎಸ್‌.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ಇಂದು ಬೆಳಗಾವಿಯ ನಗರದಲ್ಲೇ ಮೊದಲನೆಯದಾಗುವ ರೀತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು  ಆಚರಿಸಲಾಯಿತು. ಜೊತೆಗೆ ಇದೇ ಸಂಧರ್ಭದಲ್ಲಿ ನಗರದ ಸೌಂದರ್ಯ ವೃದ್ಧಿಗೆ ಮೂಲ ಕಾರಣವಾಗಿರುವ ರಸ್ತೆ ವಿಭಾಜಕಗಳ ನಿರ್ವಹಣೆಗಾಗಿ
ಶಿವಬಸವ ನಗರದ ರಸ್ತೆ ವಿಭಾಜಕಗಳ ದತ್ತು ಸ್ವೀಕಾರ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಮಂಗೇಶ ಪವಾರ, ಉಪ ಮಹಾಪೌರರಾದ ಶ್ರೀಮತಿ ವಾಣಿ ವಿಲಾಸ್ ಜೋಷಿ ಮತ್ತು ಶಿವಬಸವ ನಗರದ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ರೇಖಾ ಹುಗಾರ ಅವರು ಉಪಸ್ಥಿತರಿದ್ದು ರಸ್ತೆ ವಿಭಜಕಗಳಲ್ಲಿ ಸಸಿಗಳನ್ನ ನೆಟ್ಟು, ಈ ಕಾರ್ಯಕ್ರಮ ಮತ್ತು ಸಾಮಾಜಿಕ ಕಳಕಳಿವುಳ್ಳ ಆಲೋಚನೆ ಬಹಳ ವಿಶಿಷ್ಟವಾಗಿದ್ದು, ಅನನ್ಯವಾಗಿದ್ದು, ಇಡೀಯ ಬೆಳಗಾವಿ ನಗರಕ್ಕೆ ಹಾಗೂ ಬೇರೆ ಮಹಾವಿದ್ಯಾಲಯಗಳಿಗೆ ಮಾದರಿಯಾಗಿದೆ ಎಂಬ ಮೆಚ್ಚುಗೆಯ ಮಾತುಗಳನ್ನ ಹಾಗೂ ಮಹಾನಗರ ಪಾಲಿಕೆಯ ಜೊತೆಗೆ ಕೈಗೊಡಿಸಿ ನಗರ ಸೇವೆಗೆ ಅನಿಯಾಗಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳನ್ನ ಮಹಾವಿದ್ಯಾಲಯದ ಆಡಳಿತ ಮಂಡಳಿಗೆ ತಿಳಿಸಿದರು.
ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ  ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸೈದಾ ಅಫ್ರೀನ್ ಬಾನು ಅವರೂ ಉಪಸ್ಥಿತರಿದ್ದು ರಸ್ತೆ ವಿಭಜಕಗಳಲ್ಲಿ ಸಸಿಗಳನ್ನ ನೆಟ್ಟು, ಸಸಿಗಳನ್ನ ನೆಡುವುದಷ್ಟೇ ಅಲ್ಲ ಎಲ್ಲ ಸಸಿಗಳ ಅಚ್ಚುಕಟ್ಟಾದ ನಿರ್ವಹಣೆ ಅಗತ್ಯವಾಗಿದ್ದು ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಅದನ್ನ ಜವಾಬ್ದಾರಿಯುತವಾಗಿ ನಿರ್ವಹಿಸುತ್ತದೆ ಎಂಬ ನಂಬಿಕೆಯ ಧನಾತ್ಮಕ ಮಾತುಗಳನ್ನ ಆಡಿದರು.
 ಈ ಮಹತ್ವಪೂರ್ಣ ಕಾರ್ಯಕ್ರಮದ ಪಾವನ ಸಾನಿಧ್ಯವನ್ನ ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಈ ಹೊಸ ಪ್ರಯತ್ನಕ್ಕೆ ಹಾಗೂ ಅವರ ತಂಡಕ್ಕೆ ಶುಭಾಶಯಗಳನ್ನ, ಅಭಿನಂದನೆಯನ್ನ ತಿಳಿಸಿ ನಮ್ಮ ಮಹಾವಿದ್ಯಾಲಯದ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಮಹಾಪೌರರು, ಉಪಮಹಾಪೌರರು, ಪಾಲಿಕೆ ಸದಸ್ಯರು, ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರು ಆಗಮಿಸಿದ್ದು ಬಹಳ ಖುಷಿ ತಂದಿದ್ದು, ಅವರ ಸಲಹೆ, ಸಹಕಾರ ಮಹಾವಿದ್ಯಾಲಯಕ್ಕೆ ಇರಲೆಂಬ ಆಶಯದೊಂದಿಗೆ ಎಲ್ಲ ಮಹನೀಯರಿಗೂ ಆಶೀರ್ವದಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಎಫ್. ವಿ. ಮಾನ್ವಿ, ಪ್ರಾಚಾರ್ಯರಾದ ಡಾ. ಬಿ. ಆರ್. ಪಟಗುಂದಿ, ಮತ್ತು ವಿಭಾಗ ಮುಖ್ಯಸ್ಥರು ಇದ್ದು ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಮಂಜುನಾಥ ಶರಣಪ್ಪನವರ ಅವರು ಈ ಯೋಜನೆಯ ಹಾಗೂ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನ ವಹಿಸಿ ಆಯೋಜನೆ ಮಾಡಿ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಪ್ರೇರಣೆಯ ಸಂದೇಶ ನೀಡಿದರು.
ಈ ಕಾರ್ಯಕ್ರಮದ ಪ್ರಮುಖ ಉದ್ದೇಶವು ಪರಿಸರ ಸಂರಕ್ಷಣೆ ಮತ್ತು ಶಹರದ ರಸ್ತೆ ವಿಭಾಜಕ ಪ್ರದೇಶಗಳ ಸೌಂದರ್ಯ ವೃದ್ಧಿ ಹಾಗೂ ಸ್ಥಳೀಯ ನಾಗರಿಕರಲ್ಲಿ ಪರಿಸರ ಜಾಗೃತಿಯನ್ನೂ ಮೂಡಿಸುವುದಾಗಿದ್ದು ಭೂಮಾತೆಗೆ ಗೌರವ ಸಲ್ಲಿಸುವುದರ ಜೊತೆಗೆ ಎಸ್‌ಜಿಬಿಐಟಿಯ ಎನ್‌ಎಸ್‌ಎಸ್ ಘಟಕದ ಸ್ವಯಂ ಸೇವಕರು, ವಿದ್ಯಾರ್ಥಿಗಳು ಹಾಗೂ ಎಲ್ಲ ಶಿಕ್ಷಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.
WhatsApp Group Join Now
Telegram Group Join Now
Share This Article
error: Content is protected !!