ಆಧುನಿಕ ಯುಗದಲ್ಲಿ ಯೋಗದ ಮಹತ್ವ

Murugesh Shivapuji
ಆಧುನಿಕ ಯುಗದಲ್ಲಿ ಯೋಗದ ಮಹತ್ವ
WhatsApp Group Join Now

ಇಂದಿನ ಕಲುಷಿತ ವಾತಾವರಣದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಅತಿಕ್ರಮಣದಿಂದ ಶಾರೀರಿಕ ಒತ್ತಡಗಳು ಹೆಚ್ಚಾಗಿ ರಾಗ, ದ್ವೇಷ, ಮಾನಸಿಕ ಒತ್ತಡ, ಆಲಸ್ಯಗಳಿಂದ ಮಾನಸಿಕ ಅಶಾಂತಿ ,ರೋಗ ರುಜಿನಗಳು ಅಂಟಿಕೊಳ್ಳುವುದು ಸಾಮಾನ್ಯವಾಗಿದೆ
ವಿಜ್ಞಾನ ಎಷ್ಟೇ ಬೆಳೆದರೂ ಇವುಗಳನ್ನು ಹತೋಟಿಯಲ್ಲಿಡಲು ಹರಸಾಹಸ ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ “ಮರಳಿ ಗೂಡಿಗೆ ಸೇರು” ಎಂಬಂತೆ ಭಾರತೀಯ ತತ್ವಜ್ಞಾನವಾದ ಯೋಗ ಜೀವನ ಒಂದೇ ದಾರಿ ಎಂದು ಹೇಳಬಹುದು.
ಯೋಗವೆಂದರೆ ಕೇವಲ ಶಾರೀರಿಕ ಚಲನವಲನ ಅಷ್ಟೇ ಅಲ್ಲ. ಶರೀರದ ಜೊತೆಗೆ ಮಾನಸಿಕ ಮತ್ತು ಬೌದ್ಧಿಕ ಆಂತರಿಕ ಕ್ರಿಯೆಗಳ ಸಂಯೋಗ ಉಂಟಾಗುತ್ತದೆ ಪ್ರಕೃತಿ ಮತ್ತು ಮಾನವ ಒಂದೇ ರೂಪದ ಎರಡು ಮುಖಗಳು ಹೇಗೆ ಪ್ರಕೃತಿ ತನ್ನ ಸಂರಕ್ಷಣೆಗೆ ಕಾಲಗಳ ಬದಲಾವಣೆ ಮಾಡಿಕೊಳ್ಳುವುದೋ ಹಾಗೆ ಶರೀರ ಕೂಡ ತನ್ನ ರಕ್ಷಣೆಗೆ ಕಾಲಗತಿಗಳನ್ನು ನಿರ್ಮಿಸಿ ಕಾಲಕ್ಕೆ ತಕ್ಕಂತೆ ತನ್ನ ಆಂತರಿಕ ಗತಿಯನ್ನು ಬದಲಿಸುತ್ತಾ ಇರುತ್ತದೆ. ಮುಂಜಾನೆ , ಅಪರಾನ್ಹ, ಸಂಧ್ಯಾಕಾಲ ಹೀಗೆ ಈ ಬದಲಾವಣೆಗೆ ಪೂರಕವಾಗಿ ನಮ್ಮ ಜೀವನ ಕ್ರಮವಾಗಬೇಕು.
ಶರೀರ ಮತ್ತು ಇಂದ್ರಿಯಗಳು ನಿರೋಗಿ ಆಗಿರಬೇಕಾದರೆ ಮನಸ್ಸಿನ ನಿಗ್ರಹ ಚಿಕಿತ್ಸೆ ಆಗಬೇಕು. ಯಾವುದೇ ವಿಜ್ಞಾನಕ್ಕೆ ವಿಷಯ ವಸ್ತು ಪ್ರಮುಖವಾದಂತೆ ಯೋಗ ಜೀವನಕ್ಕೆ ಮನಸ್ಸು ಮತ್ತು ಆಂತರಿಕ ಇಂದ್ರಿಯಗಳು ಮೂಲವಾಗಿವೆ.
ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ತು ವೈದ್ಯಕೇನ
ಯೋಪಾಕರೋತ್ತಂ ಪ್ರವರಂ ಮುನಿ ನಾಂ
ಕುಜಂಜಲಿ ಸ್ಯಾಂಜಲಿರಾನ ತೋಸ್ಮೆ
ಮನುಷ್ಯನ ಚಂಚಲತೆಯನ್ನು ಇಂದ್ರಿಯಗಳ ಮೂಲಕ ಆನಂದ , ಸಂತೋಷ, ಸತ್ಸಂಗ ಇತ್ಯಾದಿಗಳಿಂದ ಶರೀರದಲ್ಲಿ ಉಂಟಾಗುವ ದೋಷಗಳನ್ನು ಇಂದ್ರಿಯಗಳ ಸಮತೋಲನ ಆಹಾರ, ನಿದ್ರೆ , ನೀರಡಿಕೆ, ವಿಹಾರಗಳಿಂದ ಯಾರು ಯೋಗ ಸಾಧನೆ ಮಾಡುತ್ತಾರೋ ಅವರೇ ನಿಜವಾದ ಯೋಗಿಗಳು. ಸ್ನಾನದಿಂದ ಶರೀರ ಶುಚಿತ್ವ ಮಾಡಿಕೊಳ್ಳುವುದರ ಜೊತೆಗೆ ಆಂತರಿಕ ಶರೀರದ ಪರಿಶುದ್ಧತೆಯೂ ಅಷ್ಟೇ ಪ್ರಮುಖವಾಗಿದೆ.
ಶರೀರಕ್ಕೆ ಆಹಾರ ಹೇಗೆ ಅವಶ್ಯವಾಗಿದೆಯೋ ಹಾಗೆ ಹವೆ, ಗಾಳಿ, ನೀರು, ಬಿಸಿಲು, ಆಕಾಶ ಕೂಡ ಅಷ್ಟೇ ಅವಶ್ಯವಾಗಿದೆ ಅದರಂತೆ ಇವುಗಳನ್ನು ಸೇವಿಸುವುದು ಅನಿವಾರ್ಯ. ಶರೀರದಲ್ಲಿ ದಿನಂಪ್ರತಿ ದೋಷಗಳು ಹುಟ್ಟಿಕೊಳ್ಳುತ್ತವೆ ದೋಷಗಳ ಪರಿಣಾಮವಾಗಿ ಮನಸ್ಸಿನಲ್ಲಿ ಕೋಪ, ತಾಪ ,ಸಿಟ್ಟು, ಭಯ ಇತ್ಯಾದಿ ಹುಟ್ಟಿಕೊಳ್ಳುತ್ತವೆ. ಯಾವುದೇ ಕಾರಣಕ್ಕೂ ಮಲ ಮೂತ್ರಗಳನ್ನು ತಡೆಯಬಾರದು, ಇಂತಹ ಕಶ್ಮಲಗಳ ನಿವಾರಣೆಗೆ ಯೋಗದಲ್ಲಿ ಕ್ರಿಯೆಗಳನ್ನು ಹೇಳಿದ್ದಾರೆ.
ವೈಜ್ಞಾನಿಕ ದೃಷ್ಟಿಯಿಂದ ಯೋಗವನ್ನು ಬಾಲ್ಯಾವಸ್ಥೆ, ಯೌವನಾವಸ್ಥೆ, ವೃದ್ಧಾಪ್ಯ ಈ ಅವಸ್ಥೆಗಳಿಗೆ ತಕ್ಕಂತೆ ಯೋಗ ಆಚರಿಸುವುದು. ಉಚಿತ ಚಿಕಿತ್ಸೆ ರೂಪದಲ್ಲಿ ಯೋಗ ಆಚರಿಸುವುದಾದರೆ
೧ . ಸಹಜ ಯೋಗ ಪ್ರಾಥಮಿಕ ಹಂತದಲ್ಲಿ ಆಚರಿಸುವ ಹಾಗೂ ದಿನಂಪ್ರತಿ ಆಚರಿಸುವ ವಿಧಾನ.
೨ . ಹಠ ಯೋಗ ಒಂದು ನಿರ್ದಿಷ್ಟ ಫಲ ದೊರೆಯುವವರೆಗೆ ದಿನಂಪ್ರತಿ ಆಚರಿಸುವ ವಿಧಾನ.
೩ . ಕಲ್ಚರಲ್ ಯೋಗ ರೋಗಗಳಿಗೆ ತಕ್ಕಂತೆ ಆಚರಿಸುವ ವಿಧಾನ.
ಅಷ್ಟ ಚಕ್ರ ನವದ್ವಾರ ದೇವಾನಾಂ ಪುರಯೋದ್ಯಾ ತಸ್ಯಾಮ್ ಹಿರಣ್ಯಾಯ ಸ್ವರ್ಗೋ ಜ್ಯೋತಿ ಪಾವರತ
ಶರೀರವು 8 ಚಕ್ರಗಳು 9 ದ್ವಾರಗಳಿಂದ ಆಂತರಿಕ ಕ್ರಿಯೆ ನಡೆಯುತ್ತಿರುತ್ತದೆ. ಈ ಕ್ರಿಯೆಗಳಿಂದ ನಾವು ಇಂದ್ರಿಯಗಳ ಮೂಲಕ ಸ್ವರ, ನಾದ, ಶಬ್ದ,ಸ್ವಾದ ಗಳನ್ನು ಅನುಭವಿಸುತ್ತೇವೆ. ಇವುಗಳಿಗೆ ಬಾಧಕವಾಗದ ಹಾಗೆ ಜೀವನ ಕ್ರಮವೇ ಯೋಗ ಜೀವನವಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಮನಸ್ಸು ತನ್ನ ಶಾಂತ ಸ್ವಭಾವವನ್ನು ತನ್ನ ಶರೀರದಲ್ಲಿಯೇ ಕಂಡುಕೊಳ್ಳಬೇಕೇ ಹೊರತು ಹಿಮಾಲಯ ಪರ್ವತದಲ್ಲಿ ಅಲ್ಲ. ಇಂತಹ ಪವಿತ್ರ ಜೀವನ ಸಾಧನೆ ನಮ್ಮ ದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವದು ನಮ್ಮ ಪುಣ್ಯ. ಯೋಗ ಜೀವನ ಎಲ್ಲರೂ ನಡೆಸುವಾ-ಆಚರಿಸುವಾ.

ಡಾ. ಎಸ್.ವಿ.ಹಿರೇಮಠ ಪ್ರಕೃತಿ ಚಿಕಿತ್ಸಕರು ಮತ್ತು ಯೋಗ ತಜ್ಞರು.
ನಂ:931, ಶ್ರೀ ಮಹಾಲಕ್ಷ್ಮಿ ನಿಲಯ, ಸ್ಕೀಮ್ ನಂ.40. ಕುವೆಂಪು ನಗರ ಬೆಳಗಾವಿ.
9480498439

WhatsApp Group Join Now
Telegram Group Join Now
Share This Article
error: Content is protected !!