ಗಡಿ ಕನ್ನಡಿಗ
ಖಾನಾಪುರ:ಹಸಿವುಮುಕ್ತ ಕರ್ನಾಟಕ ಎಂಬ ದಿವ್ಯ ಸಂಕಲ್ಪವನ್ನು ಇರಿಸಿಕೊಂಡು ರಾಜ್ಯಾದ್ಯಂತ ಕಾಂಗ್ರೆಸ್ ಸರಕಾರದದ ವತಿಯಿಂದ ಇಂದಿರಾ ಕ್ಯಾಂಟೀನ್ ಗಳನ್ನ ನಿರ್ಮಿಸಲಾಗುತ್ತಿದೆ ಇದರಿಂದ ಬಡವರ ಹೊಟ್ಟೆ ತುಂಬಲಿದ್ದು ಇದರಿಂದ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅಭಿಪ್ರಯಾಪಟ್ಟರು.
ಇಲ್ಲಿನ ತಹಶಿಲ್ದಾರ ಕಚೇರಿ ವೃತ್ತದ ಪಕ್ಕದಲ್ಲಿ ಹೊಸದಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯಾದ್ಯಂತ ಬಡವರಿಗೆ ಕಡಿಮೆ ದರದಲ್ಲಿ ಬಡವರ ಹೊಟ್ಟೆ ತುಂಬಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಯೋಜನೆಯನ್ನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದು ಮೊದಲಿನಿಂದಲೂ ಕಾಂಗ್ರೆಸ್ ಸರಕಾರ ಬಡವರ ಪರ ಕಾಳಜಿ ಹೊಂದಿದ್ದು ಇಂತಹ ಕೆಲಸಕ್ಕೆ ಪ್ರೇರಣೆಯಾಗಿದೆ ಎಂದರು.
ಈ ವೇಳೆ ಮಾತನಾಡಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿದ್ದು ಖುಷಿಯ ಸಂಗತಿಯಾಗಿದೆ ತಾಲೂಕಿನ ವಿವಿಧ ಮೂಲೆಗಳಿಂದ ತಮ್ಮ ಕಚೇರಿ ಕೆಲಸಗಳಿಗೆ ಮತ್ತು ಆಸ್ಪತ್ರೆಗೆ ಬರುವ ಸಾಕಷ್ಟು ಸಾರ್ವಜನಿಕರಿಗೆ ಈ ಕ್ಯಾಂಟೀನ್ ನಿಂದ ಪ್ರಯೋಜನವಾಗಲಿದ್ದು ಇದರ ಕುರಿತಾಗಿ ನಾನು ಹಲವಾರು ಬಾರಿ ರಾಜ್ಯ ಸರಕಾರಕ್ಕೆ ಪತ್ರದ ಮೂಲಕ ಗಮನ ಸೆಳೆದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾಧಿಕಾರಿ ಮಂಜುನಾಥ ಕಲಾದಗಿ, ಪಪಂ ಅದ್ಯಕ್ಷೆ ಮೀನಾಕ್ಷಿ ಬೈಲೂರಕರ,ಉಪಾಧ್ಯಕ್ಷ ಲಕ್ಷ್ಮಣ ಮಾದಾರ,ಸದಸ್ಯರಾದ ಮೇಘಾ ಕುಂದರಗಿ,ತೋಹಿದ್ ಚಾಂದಕನವರ,ಬಸವರಾಜ ಅಂಕಲಗಿ,ಪ್ರಕಾಶ ಬೈಲೂರಕರ ಪಪಂ ಮುಖ್ಯಾಧಿಕಾರಿ ಸಂತೋಶ ಪಾಟೀಲ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಾದ ಭಾರತಿ ಪಾಟೀಲ್,ದೀಪಾ ಪಾಟೀಲ್,ಸಾವಿತ್ರಿ ಮಾದರ ಮುಖಂಡರಾದ ಈಶ್ವರ ಘಾಡಿ,ಲಿಯಾಕತಲಿ ಬಿಚುನವರ,ರಾಜು ಖಾತೇದಾರ,ಈರಣ್ಣ ರಾಹುತ್ ಮತ್ತು ಪಪಂ ಅಧಿಕಾರಿಗಳು ಸದಸ್ಯರು ಕಾಂಗ್ರೆಸ್,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.