ನೇಣು ಬಿಗಿದ ಸ್ಥಿತಿಯಲ್ಲಿಅಪರಿಚಿತ ಶವ ಪತ್ತೆ

Prasanna Kumbar
WhatsApp Group Join Now

ಗಡಿ ಕನ್ನಡಿಗ ಸುದ್ದಿ

ಖಾನಾಪುರ:ತಾಲೂಕಿನ ಚೋರ್ಲಾದ ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ನಡೆದಿದೆ.

ಚೋರ್ಲಾದ ಅರಣ್ಯ ಇಲಾಖೆ ಸಿಬ್ಬಂದಿಯಾದ(ಗುತ್ತಿಗೆ) ಗೋಪಾಲ ಗಾವ್ಕರ್‌ ಎಂಬುವವರು ಕೆಲಸಕ್ಕೆ ನಮ್ಮ ಹಳ್ಳಿಗೆ ಹೋಗುವ ದಾರಿಯಲ್ಲಿ ಸುಮಾರು 40-50 ವಯಸ್ಸಿನ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಖಾನಾಪುರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮೃತ ವ್ಯಕ್ತಿಯು ಮರಕ್ಕೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಗುಲಾಬಿ ಬಣ್ಣದ ಶರ್ಟ್‌ ಹಾಗೂ ನೀಲಿ ಪ್ಯಾಂಟ್‌ ಧರಿಸಿದ್ದು ಸುಮಾರು 4-5 ದಿನಗಳ ಹಿಂದೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದ್ದು ಖಾನಾಪುರ ಪೊಲೀಸರಿಗೆ ವ್ಯಕ್ತಿಯ ಕುರುಹು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now
Share This Article
error: Content is protected !!