ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ವಿಶೇಷ ಪ್ರವಚನ ಪತ್ರಿಬಸವೇಶ್ವರ ಶರಣ ಸಂಸ್ಕೃತಿಯ ಉತ್ಸವದ ದ್ವಾದಶೋತ್ಸವ ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ 43ನೆಯ ವಚನೋತ್ಸವ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮ ಒಂಬತ್ತನೇ ಅನುಭಾವ ಗೊಷ್ಟಿಯ ಎರಡನೆಯ ಶ್ರಾವಣ ಸೋಮವಾರ ವಿಶೇಷ ಕಾರ್ಯಕ್ರಮ ಉದ್ದೇಶಿಸಿ ಧಾರವಾಡ ಆಕಾಶವಾಣಿ ಕೇಂದ್ರದ ನಿರ್ದೇಶಕರಾದ ಡಾ ಬಸ್ಸು ಬೇವಿನ ಗಿಡದ ವಿಶೇಷ ಉಪನ್ಯಾಸ ನೀಡಿ ನಡೆ-ನುಡಿಗಳನ್ನು ಒಂದಾಗಿಸಿಕೊಂಡ ವಚನ ಸಾಹಿತ್ಯದ ಪ್ರಚಾರ ನಡೆ-ನುಡಿಗಳಿಂದಲೇ ಆಗಬೇಕು ಪ್ರತಿಯೊಂದು ಮನೆ ಮನಗಳಲ್ಲಿ ವಚನ ಸಾಹಿತ್ಯದ ಪ್ರಸಾರ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಪ್ರಚಾರವಾಗುತ್ತಿರುವುದು ಸಂತಸ ತಂದಿದೆ ಎಂದರು. ಹುಬ್ಬಳ್ಳಿಯ ಖ್ಯಾತ ಉದ್ದಿಮೆದಾರ ಶರಣ ದಂಪತಿಗಳಾದ ಆರತಿ ಮೃತ್ಯುಂಜಯ ಮರೋಳ್ ದಂಪತಿಗಳನ್ನು ಸನ್ಮಾನಿಸಲಾಯಿತು. ದಾನೇಶ್ವರಿ ಜಿನ್ನಿಂಗ್ ಫ್ಯಾಕ್ಟರಿಯ ಮಾಲೀಕರಾದ ಶ್ರೀ ಶಂಕ್ರಣ್ಣ ಬಾಳಿ ಅವರು ಅಧ್ಯಕ್ಷತೆ ವಹಿಸಿದ್ದರು ರಾಮಲಿಂಗ ಕಾಡನ್ನವರ ವೀರಣ್ಣ ವಾಲಿ ದುಂಡಪ್ಪ ಕೋಟೂರ್ ಅನ್ನ ದಾಸೋಹ ಸೇವೆಗೈದರು ಗೌರಮ್ಮ ಕರ್ಕಿ ಸ್ವಾಗತಿಸಿದರು ಮೋಹನ್ ಬೇವಿನಗಿಡದ ಪರಿಚಯಿಸಿದರು. ಕಾಡಪ್ಪ ರಾಮಗುಂಡಿ ವಂದಿಸಿದರು. ರಾಜೇಶ್ವರಿ ದ್ಯಾಮಣಗೌಡರ ನಿರೂಪಿಸಿದರು. ಸಿದ್ದಣ್ಣ ಗದಗ ನಾಗನಗೌಡ ಪಾಟೀಲ ಮಾಜಿ ಪುರಸಭೆ ಅಧ್ಯಕ್ಷ ಮಲ್ಲನಾಯ್ಕ ಪಾಟೀಲ ಗೊರವನಕೊಳ್ಳ ದುಂಡಯ್ಯ ಕುಲಕರ್ಣಿ ವೀರಭದ್ರ ಶ್ರೀಶೈಲ ಶರಣಪ್ಪನವರ್ ವೀರಭದ್ರ ಕಾಪ್ಸೆ ಬೊಂಗಾಳೆ ಅನ್ನಪೂರ್ಣ ಕನೋಜ ಮಂಗಳ ಅಕ್ಕಿ ಮೀನಾಕ್ಷಿ ಕೊಡಸೋಮನ್ನವರ ಪತ್ರಿ ಬಸವನಗರದ ಅಭಿವೃದ್ಧಿ ಸಂಘ ಅಜಗಣ್ಣ ಮುಕ್ತಾಯಕ್ಕ ಕದಳಿ ಮಹಿಳಾ ವೇದಿಕೆ ಬಳಗ ಪತ್ರಿಬಸವ ನಗರದ ಶರಣ ಶರಣೀಯರು ಹಾಗೂ ಉಪಸ್ಥಿತರಿದ್ದರು
Gadi Kannadiga > State > ವಚನ ಸಾಹಿತ್ಯ ಪ್ರಚಾರ ನಡೆ ನುಡಿಗಳಿಂದಲೇ ಆಗಬೇಕು-ಡಾ.ಬಸು ಬೇವಿನಗಿಡದ
ವಚನ ಸಾಹಿತ್ಯ ಪ್ರಚಾರ ನಡೆ ನುಡಿಗಳಿಂದಲೇ ಆಗಬೇಕು-ಡಾ.ಬಸು ಬೇವಿನಗಿಡದ
Murugesh29/08/2023
posted on

ಬೆಳಗಾವಿ; ವಚನ ಸಾಹಿತ್ಯ ನಡೆ ನುಡಿಗಳನ್ನು ಒಂದಾಗಿಸಿಕೊಂಡ ಸಾಹಿತ್ಯ ಈ ಸಾಹಿತ್ಯದ ಪ್ರಚಾರ ನಡೆ-ನುಡಿಗಳಿಂದಲೇ ಆಗಬೇಕು ಎಂದು ಡಾ.ಬಸು ಬೇವಿನಗಿಡದ ಹೇಳಿದರು.
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023
ದನಗಳ ಮಾಲೀಕರ ಗಮನಕ್ಕೆ
22/09/2023