ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು ಭಾರತೀಯ ಜನತಾ ಪಾರ್ಟಿ ಕೊಪ್ಪಳ ಜಿಲ್ಲಾ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ

Gadi Kannadiga
WhatsApp Group Join Now

ಕೊಪ್ಪಳ ಜೂನ್ 18:- ಚುನಾವಣೆಯಲ್ಲಿ ಗೆಲ್ಲಲೂ ರಾಜ್ಯದ ಜನಕ್ಕೆ ಉಚಿತ ಖಚಿತ ನಿಶ್ಚಿತ ಅನ್ನುವ ಗ್ಯಾರಂಟಿ ಕೊಡುವ ಭರವಸೆಯನ್ನು ನೀಡಿ ಅದನ್ನು ಈಡೇರಿಸಲು ಇಂದು ಖಜಾನೆ ಖಾಲಿಯಾಗಿದೆ, ಖಾಲಿಯಾಗಿರುವ ಖಜಾನೆಯನ್ನು ತುಂಬಿಸಲು ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆಹಾಕುವ ಮೂಲಕ ಕಷ್ಟನೀಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಇನ್ನಾದರು ಹೆಚ್ಚೆತ್ತುಕೊಂಡು ಈ ನಿರ್ಧಾರವನ್ನೂ ಹಿಂಪಡೆಯಬೇಕು.

ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ನವೀನಕುಮಾರ ಈ ಗುಳಗಣ್ಣವರ ಕುಷ್ಟಗಿ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಎಚ್ ಪಾಟೀಲ್ ಶಾಸಕರಾದ ಗಾಲಿ ಜನಾರ್ಧನರೆಡ್ಡಿ ,ರಾಜ್ಯ ಕಾರ್ಯದರ್ಶಿಗಳಾದ ಶರಣು ಬಿ ತಳ್ಳಿಕೇರಿ,ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ರಾಜ್ಯ ಕಾರ್ಯಕಾರಣಿ ಸದಸ್ಯರಾದಡಾ.ಬಸವರಾಜ ಕ್ಯಾವಟರ್,ಮಾಜಿ ಶಾಸಕರುಗಳಾದ ಶ್ರೀ ಪರಣ್ಣ ಮುನುವಳ್ಳಿ, ಶ್ರೀ ಬಸವರಾಜ ಧಡೆಸೂಗೂರು, ಎಲ್ಲಾ ಮಂಡಲದ ಅಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ

 

WhatsApp Group Join Now
Telegram Group Join Now
Share This Article
error: Content is protected !!