ಪ್ರವಾಸಿಮಂದಿರ , ಸಾರ್ವಜನಿಕ ಆಸ್ಪತ್ರೆ ಹಾಗೂ ಪುರಸಭೆ ನಡುವೆ ಹಾಯ್ದು ಹೋಗಿರುವ ರಸ್ತೆ ಸಂಪೂರ್ಣ ಕೊಳಚೆ ನೀರಿನಿಂದ ಮಲೀನ

Gadi Kannadiga
ಪ್ರವಾಸಿಮಂದಿರ , ಸಾರ್ವಜನಿಕ ಆಸ್ಪತ್ರೆ ಹಾಗೂ ಪುರಸಭೆ ನಡುವೆ ಹಾಯ್ದು ಹೋಗಿರುವ ರಸ್ತೆ ಸಂಪೂರ್ಣ ಕೊಳಚೆ ನೀರಿನಿಂದ ಮಲೀನ
WhatsApp Group Join Now

ಕುಷ್ಟಗಿ:– ಪಟ್ಟಣದಪ್ರವಾಸಿಮಂದಿರ , ಸಾರ್ವಜನಿಕ ಆಸ್ಪತ್ರೆ ಹಾಗೂ ಪುರಸಭೆ ನಡುವೆ ಹಾಯ್ದು ಹೋಗಿರುವ ರಸ್ತೆ ಸಂಪೂರ್ಣ ಕೊಳಚೆ ನೀರಿನಿಂದ ಮಲೀನ ವಾಗಿದ್ದು ದುರ್ನಾತ ಬೀರುತ್ತಿದೆ.

ಪಿಡಬ್ಲ್ಯೂಡಿ ವಸತಿ ಗೃಹಗಳ ಕೊಳಚೆ ಫೀಟ್ ನಿಂದ ಬರುವ ನೀರು ರಸ್ತೆ ಗುಂಟ ಹರಿಯುತ್ತಿದ್ದು , ರಸ್ತೆ ಸಂಪೂರ್ಣ ಹಾಳಾಗುತ್ತಿರುವುಲ್ಲದೆ ಪಾದಾಚಾರಿ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ.

ಈ ಕುರಿತಂತೆ ಪಿಡಬ್ಲ್ಯೂಡಿ ಸಿಬ್ಬಂದಿಗಳಿಗೆ ಕರೆ ಮಾಡಿ ಮಾತನಾಡಿದಾಗ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ.

ಸದರಿ ತೊಂದರೆಯನ್ನು ಸಂಬಂಧಿಸಿದವರು ಸರಿಪಡಿಸದಿದ್ದಲ್ಲಿ ರಸ್ತೆ ತಡೆ ಮಾಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯಿಂದ ಮುನ್ನೆಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ, ಉಪಾಧ್ಯಕ್ಷ ಕಿರಣ್ ಜ್ಯೋತಿ , ತಾಲೂಕು ಗೌರವಾಧ್ಯಕ್ಷ ರಾಮಣ್ಣ ಭಜಂತ್ರಿ, ಉಪಾಧ್ಯಕ್ಷ ಪರಶುರಾಮ ಬೋದೂರು ಇನ್ನಿತರರು ಹಾಜರಿದ್ದರು..

WhatsApp Group Join Now
Telegram Group Join Now
Share This Article
error: Content is protected !!