ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ನಿರ್ಮಾಣವಾಗಬೇಕಿದ್ದ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ { AIIMS}ನ್ನ ಧಾರವಾಡ ಜಿಲ್ಲೆಗೆ ವರ್ಗಾಯಿಸುವದನ್ನ ವಿರೋಧಿಸಿ ತಾಲೂಕ ದಂಡಾಧಿಕಾರಿಗಳಿಗೆ ಮನವಿ

Gadi Kannadiga
WhatsApp Group Join Now

ಕುಷ್ಟಗಿ:- ತಾಲೂಕಿನ ಎಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಲ್ಲಿ ವಿನಂತಿಸಿಕೊಳ್ಳುವುದೇನಂದರೆ ನಾಳೆ ದಿನಾಂಕ 06 07 2024ರಂದು ನಮ್ಮ ಕಲ್ಯಾಣ ಕರ್ನಾಟಕ ಬಾಗದಲ್ಲಿ ಅಂದ್ರೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ನಿರ್ಮಾಣವಾಗಬೇಕಿದ್ದ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ { AIIMS}ನ್ನ ಧಾರವಾಡ ಜಿಲ್ಲೆಗೆ ವರ್ಗಾಯಿಸುವದನ್ನ ವಿರೋಧಿಸಿ ಶಾಂತಿಯುತ ಹೋರಾಟದ ಮೂಲಕ ಮಾನ್ಯ ದಂಡಾಧಿಕಾರಿಗಳು ಕುಷ್ಟಗಿ ರವರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಕೊಡಲಾಗುವುದು ಆದ ಕಾರಣ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳು ತಾಲೂಕ ಪದಾಧಿಕಾರಿಗಳು ಎಲ್ಲಾ ಗ್ರಾಮ ಘಟಕಗಳು ಅದ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾರುತಿ ಎಚ್ ಹಲಗಿ ಕರವೇ ತಾಲೂಕ ಅಧ್ಯಕ್ಷರು ಕುಷ್ಟಗಿ ರವರು ಮನವಿ ಮಾಡಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ

WhatsApp Group Join Now
Telegram Group Join Now
Share This Article
error: Content is protected !!