ಭಾರತ ಸರ್ಕಾರದ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಷ್ಟ್ರೀಯ ಮಾದರಿ ಸಮೀಕ್ಷಾ ಇಲಾಖೆ ಬೆಳಗಾವಿ. ಹಾಗೂ ಗ್ರಾಮ ಪಂಚಾಯತ ಅಗಸಗಾ ಇವರ ಆಶ್ರಯದಲ್ಲಿ ಎನ್ ಎಸ್ ಓ ಇಲಾಖೆಯ ವಿವಿಧ ಸರ್ವೆಗಳ ಕುರಿತು ಸಮುದಾಯಿಕ ಚರ್ಚೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮ ಇಲಾಖೆಯಿಂದ ಸುಮಾರು 10 ಸರ್ವೆಗಳನ್ನು ಮಾಡಲಾಗುತ್ತದೆ. ಭಾರತ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಅಂಕಿ ಅಂಶಗಳು ತುಂಬಾ ಉಪಯುಕ್ತವಾಗುತ್ತದೆ. ಸರಿಯಾದಂತಹ ಮಾಹಿತಿಯನ್ನು ಜನರು ನೀಡಿದರೆ ಉತ್ತಮ ಯೋಜನೆಗಳನ್ನು ರೂಪಿಸಬಹುದು. ಆವರ್ತಕ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳನ್ನು ನಡೆಸುವ ಭಾರತದಲ್ಲಿನ ಅತಿದೊಡ್ಡ ಇಲಾಖೆ ಆಗಿದೆ ಎಂದು. ಸಹಾಯಕ ನಿರ್ದೇಶಕರಾದ ಮೋಹನ್ ಕಾರಜೋಳ ರವರು ಮಾತನಾಡಿದರು.
ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿದಂತ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮೃತ ಮುದ್ದನವ ರವರು ಮಾತನಾಡಿ ಎನ್ಎಸ್ಓ ಇಲಾಖೆಯಿಂದ. ಗ್ರಾಮ ಸುಧಾರಣೆಗಾಗಿ ವಿವಿಧ ಯೋಜನೆಗಳನ್ನು ರೂಪಿಸುತ್ತದೆ. ಮನೆ ಮನೆಗೆ ಸರ್ವೇ ಮಾಡುವಂತಹ ಸಂದರ್ಭದಲ್ಲಿ ಇಲಾಖೆಗೆ ಸಾರ್ವಜನಿಕರು ಸರಿಯಾದ ಮಾಹಿತಿ ನೀಡಿದರೆ ಉತ್ತಮ ಯೋಜನೆ ರೂಪಿಸುವಲ್ಲಿ ಅನುಕೂಲವಾಗುತ್ತದೆ ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಏನ್ ಎ ಮುಜಾವರ್. ಗ್ರಾಮ ಪಂಚಾಯತಿ ಉಪಾಧ್ಯಕ್ಷರು. ಸರ್ವ ಸದಸ್ಯರು. ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ದೇವೇಂದ್ರ ಪ್ರತಾಪ್ ಸಿಂಗ್ ಪ್ರಾಸ್ತಾವಿಕ ಮಾತನಾಡಿದರು. ನಾಗೇಂದ್ರ ಚೌಗಲಾ ಕಾರ್ಯಕ್ರಮ ನಿರೂಪಿಸಿದರು.