ಗಡಿ ಕನ್ನಡಿಗ

ಖಾನಾಪುರ: ತಾಲೂಕಿನ ಬೀಡಿ ಗ್ರಾಮದ ನೋಬೆಲ್ ಐಟಿಆಯ್ ಕಾಲೇಜಿನಲ್ಲಿ ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ಕ್ರಾಪ್ಟ್ ಶಾಲಾ ಕೌಶಲ್ಯ ತರಬೇತಿಯನ್ನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮರ್ಥ ಸಾಯಿ ಪೌಂಡೇಶನ್ ಅಧ್ಯಕ್ಷರಾದ ಸುಭಾಶ ಗೌಡ ಈಗಿನ ಮಕ್ಕಳಲ್ಲಿ ಕಲೆ ಬಗ್ಗೆ ಆಸಕ್ತಿ ತುಂಬಾ ಕಡಿಮೆಯಾಗಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಕಲೆ ಮತ್ತು ಕರಕುಶಲತೆ ಬಗ್ಗೆ ತಿಳಿಸಿಕೊಡುವ ಮತ್ತು ಮಕ್ಕಳಲ್ಲಿ ಆಸಕ್ತಿ ಮೂಡಿಸುವದು ಅತ್ಯವಶವಾಗಿದ್ದು ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವ ನೋಬೆಲ್ ಶಾಲಾ ಆಡಳಿತ ಮತ್ತು ಸಿಬ್ಬಂದಿಯವರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಮದ ಮುಖ್ಯ ಅತಿಥಿಯಾಗಿ ಬೀಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲಕ್ಷ್ಮಣ ಕದಂ,ಚಂದ್ರಕಾಂತ ಕಲ್ಲೊಳಿ,ನಂದಿನಿ ಪಾಟೀಲ್,ಸ್ವಾತಿ ಪೂರಿ,ಪಿರೋಜ ಮುಲ್ಲಾ,ಕೃಷ್ಣಾ ನಾಯಕ ಮಂಜು ಕದಂ ಮತ್ತು ಇನ್ನಿತರರು ಉಪಸ್ಥಿತರಿದ್ದರು.


