State

ಚಿಂಚಣಿ ಶ್ರೀ.ಗಳಿಗೆ ಜಿಲ್ಲಾ ಸಾಹಿತ್ಯ ಪರಿಷತ್ತಿನ ಶ್ರದ್ಧಾಂಜಲಿ

WhatsApp Group Join Now
Telegram Group Join Now

ಬೆಳಗಾವಿ ; ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವತಿಯಿಂದ ಬೆಳಗಾವಿ ಕನ್ನಡ ಭವನದಲ್ಲಿ ಲಿಂಗೈಕ್ಯ ಶ್ರೀ ಅಲ್ಲಮ ಪ್ರಭು ಮಹಾಸ್ವಾಮಿಗಳು ಚಿಂಚಣಿ ಅವರ ದಿವ್ಯ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ. ಶ್ರೀ.ಮೆಟಗುಡ್ಡ ಅವರು ಮಾತನಾಡುತ್ತಾ ಕರ್ನಾಟಕದ ಗಡಿಯಲ್ಲಿ ಕನ್ನಡದ ಗುಡಿಯನ್ನು ಕಟ್ಟುವ ಕೈಂಕರ್ಯವನ್ನು ಶ್ರೀಗಳು ಮಾಡಿದ್ದಾರೆ ಎಂದು ಅವರ ಸೇವೆಯ ಗುಣಗಾನ ಮಾಡಿದರು.ಹುಕ್ಕೇರಿ ತಾಲೂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ ಅವಲಕ್ಕಿ ಅವರು ಮಾತನಾಡಿ ಪೂಜ್ಯ ಶ್ರೀಗಳ ಕನ್ನಡ ಅಭಿಮಾನದ ಕಾರ್ಯಕ್ರಮಗಳ ಕುರಿತು ಶ್ಲಾಘಿಸುತ್ತ ನುಡಿ ನಮನ ಸಲ್ಲಿಸಿದರು. ತಾಲೂಕಾ ಅಧ್ಯಕ್ಷರುಗಳಾದ ಶ್ರೀಮತಿ ಭಾರತಿ ಮದಭಾವಿ, ಶ್ರೀ ಈರಣ್ಣ ಶಿರಗಾವಿ, ಶ್ರೀ ಸುರೇಶ ಹಂಜಿ, ಶ್ರೀ ರವೀಂದ್ರ ಪಾಟೀಲ, ಬಸವ ಪ್ರಭು ಹಿರೇಮಠ,ಶ್ರೀ ಕಾಮಣ್ಣವರ, ಶ್ರೀ ಪಾಂಡುರಂಗ ಜಟಗನ್ನವರ,ಶ್ರೀ ಎನ್. ಆರ್. ಠಕ್ಕಾಯಿ, ಡಾ//ಎಸ್. ಬಿ. ದಳವಾಯಿ, ಶ್ರೀ ಎಮ್ ವಾಯ್. ಮೆಣಸಿನಕಾಯಿ, ಶ್ರೀ ವೀರಭದ್ರ. ಮ. ಅಂಗಡಿ,ಶ್ರೀ ಪ್ರಭು ಹಿರೇಮಠ,ಶ್ರೀ ಚೇತನ ಏಣಗಿಮಠ, ಶ್ರೀಮತಿ. ಪ್ರತಿಭಾ. ಕಳ್ಳಿಮಠ, ಶ್ರೀ ವಿನೋದ ಜಗಜಂಪಿ,ಮುಂತಾದ ಎಲ್ಲ ಕನ್ನಡಭಿಮಾನಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts